For the best experience, open
https://m.samyuktakarnataka.in
on your mobile browser.

ಬಿಸಿಯೂಟದಲ್ಲಿ ಹಲ್ಲಿ ವಿದ್ಯಾರ್ಥಿಗಳು ಅಸ್ವಸ್ಥ

10:32 PM Sep 26, 2024 IST | Samyukta Karnataka
ಬಿಸಿಯೂಟದಲ್ಲಿ ಹಲ್ಲಿ ವಿದ್ಯಾರ್ಥಿಗಳು ಅಸ್ವಸ್ಥ

ಹಾಸನ: ಶಾಲಾ ಬಿಸಿಯೂಟ ಸೇವಿಸಿ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿದ್ದಾರೆ. ಅರಕಲಗೂಡು ತಾಲೂಕಿನ ರಾಗಿಮರೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುರುವಾರ ಈ ಘಟನೆ ಸಂಭವಿಸಿದೆ. ಮಧ್ಯಾಹ್ನ ಬಿಸಿಯೂಟ ಸೇವಿಸುತ್ತಿದ್ದಾಗ ವೇಳೆ ಓರ್ವ ವಿದ್ಯಾರ್ಥಿಯ ಊಟದ ತಟ್ಟೆಯಲ್ಲಿ ಹಲ್ಲಿ ಪತ್ತೆಯಾಯಿತು. ಹಲ್ಲಿ ಸಿಕ್ಕಿದ ವಿಷಯ ತಿಳಿದ ಕೂಡಲೇ ವಾಂತಿ ಮಾಡಿಕೊಂಡ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದರು. ತಕ್ಷಣ ಅವರನ್ನು ಹಳ್ಳಿಮೈಸೂರು, ಅರಕಲಗೂಡು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.