For the best experience, open
https://m.samyuktakarnataka.in
on your mobile browser.

ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸಾವು

04:02 PM May 23, 2024 IST | Samyukta Karnataka
ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸಾವು

ಕುಷ್ಟಗಿ: ಬೈಕ್‌ ಸ್ಕಿಡ್‌ ಆಗಿ ಬಿದ್ದು ಯುವಕ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಹನಮಸಾಗರ- ಹನಮನಾಳ ರಸ್ತೆಯಲ್ಲಿ ನಡೆದಿದೆ.
ತಾಲೂಕಿನ ಬಿಳೇಕಲ್ ಗ್ರಾಮದ ಶರಣಪ್ಪ ಬಸವಂತಪ್ಪ ಭಾವಿಮನಿ (೩೨) ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಶರಣಪ್ಪ ಬಸವಂತಪ್ಪ ಭಾವಿಮನಿ ತನ್ನ ಪತ್ನಿಯ ಮೆಣಸಗೇರಿ ಗ್ರಾಮಕ್ಕೆ ಬೈಕ್ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹನಮಸಾಗರ-ಹನಮನಾಳ ರಸ್ತೆಯ ಮದ್ನಾಳ ಕ್ರಾಸ್ ಹತ್ತಿರ ಬರುತ್ತಿದ್ದಂತೆ ಏಕಾಏಕಿಯಾಗಿ ಬೈಕ್‌ ಸ್ಕಿಡ್‌ ಆಗಿದ್ದು ಸ್ಥಳದಲ್ಲಿ ಸವಾರ ಸಾವನ್ನಪ್ಪಿದ್ದಾನೆ. ಮೃತಪಟ್ಟ ಶವವನ್ನು ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಘಟನೆ ಕುರಿತು ಹನಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.