For the best experience, open
https://m.samyuktakarnataka.in
on your mobile browser.

ಮಂತ್ರಾಲಯದ ಶ್ರೀರಾಯರ ಹುಂಡಿಯಲ್ಲಿ 2.95 ಕೋಟಿ ಕಾಣಿಕೆ ಸಂಗ್ರಹ

09:36 PM Dec 27, 2023 IST | Samyukta Karnataka
ಮಂತ್ರಾಲಯದ ಶ್ರೀರಾಯರ ಹುಂಡಿಯಲ್ಲಿ 2 95 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ನಡೆದ ಹುಂಡಿಗೆ ಭಕ್ತರು ಹಾಕಿದ ಕಾಣಿಕೆ ಎಣಿಕೆ ಕಾರ್ಯ ನಡೆಸಲಾಗಿದ್ದು, 2.95 ಕೋಟಿ ಸಂಗ್ರಹವಾಗಿದೆ.
ಕಳೆದ 26 ದಿನಗಳಲ್ಲಿ ಶ್ರೀಗುರುರಾಯರ ಹುಂಡಿಯ ಹಣವನ್ನು ಎಣಿಕೆ ಮಾಡಲಾಯಿತು. ಇದರಲ್ಲಿ 2,89,63,504 ಮೊತ್ತದ ನೋಟುಗಳು, 6,10,500 ನಾಣ್ಯಗಳು ಸೇರಿದಂತೆ ಒಟ್ಟು 2,95,74,004 ರೂಪಾಯಿಗಳ ಸಂಗ್ರಹವಾಗಿದೆ. ಅಲ್ಲದೇ 71 ಗ್ರಾಂ. ಗಳಷ್ಟು ಚಿನ್ನ ಹಾಗೂ 439 ಗ್ರಾಂಗಳ ತೂಕ ಬೆಳ್ಳಿ ಸಂಗ್ರಹಣೆಯಾಗಿದೆ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.