ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮಥುರಾ: ಪೂಜೆಗೆ ಮುಸ್ಲಿಮರ ವಿರೋಧ

11:01 PM Mar 20, 2024 IST | Samyukta Karnataka

ಪ್ರಯಾಗ್‌ರಾಜ್: ಮಥುರಾದಲ್ಲಿನ ಶಾಹಿ ಈದ್ಗಾ ಆವರಣದಲ್ಲಿರುವ ಕೃಷ್ಣ ಕೂಪ(ಬಾವಿ)ದಲ್ಲಿ ಬಾಸೋಡ ಪೂಜೆ ಮಾಡುವ ಹಿಂದೂ ಭಕ್ತರ ಮನವಿಗೆ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ಮಾತಾ ಶೀತಲ ಸಪ್ತಮಿ ಹಾಗೂ ಮಾತಾ ಶೀತಲ ಅಷ್ಟಮಿ ದಿನ ಈ ಬಾವಿಯಲ್ಲಿ ಬಾಸೋಡ ಪೂಜೆ ಮಾಡಲಾಗುತ್ತಿದೆ. ಹಾಲಿ ವರ್ಷದಲ್ಲಿ ಏಪ್ರಿಲ್ ೧ ಮತ್ತು ೨ರಂದು ಪೂಜೆ ನಡೆಸಲು ಅವಕಾಶ ನೀಡಬೇಕೆಂದು ಹಿಂದೂ ಭಕ್ತರ ಪರ ಅಶುತೋಷ್ ಪಾಂಡೆ ಅಲಹಾಬಾದ್ ಹೈಕೋರ್ಟ್‌ಗೆ ಬುಧವಾರ ಮನವಿ ಸಲ್ಲಿಸಿದ್ದಾರೆ. ಶಾಹಿ ಈದ್ಗಾ ಆವರಣದಲ್ಲಿ ಪೂಜೆ ಮಾಡುವುದಕ್ಕೆ ಮುಸ್ಲಿಮ್ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು.

Next Article