For the best experience, open
https://m.samyuktakarnataka.in
on your mobile browser.

ಮಳೆಮಲ್ಲೇಶ್ವರ ಅದ್ಧೂರಿ ರಥೋತ್ಸವ

07:45 PM Aug 25, 2024 IST | Samyukta Karnataka
ಮಳೆಮಲ್ಲೇಶ್ವರ ಅದ್ಧೂರಿ ರಥೋತ್ಸವ

ಕೊಪ್ಪಳ: ಐತಿಹಾಸಿಕ ಪ್ರಸಿದ್ಧ ಮಳೆಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವವು ಅದ್ಧೂರಿಯಾಗಿ ಜರುಗಿತು.
ಭಾನುವಾರ ಸಂಜೆ ಗೋಧೂಳಿ ಸಮಯಕ್ಕೆ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಳೆಮಲ್ಲೇಶ್ವರನ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು. ರಥವೂ ಸಾಗುತ್ತಿದ್ದಂತೆಯೇ ಭಕ್ತರು ಮಳೆಮಲ್ಲೇಶ್ವರ ಮಹಾರಾಜಕೀ ಜೈ ಎನ್ನುವ ಘೋಷಣೆಗಳನ್ನು ಕೂಗಿದರು. ನಗರ ಸೇರಿ ತಾಲ್ಲೂಕಿನ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಮಳೆಮಲ್ಲೇಶ್ವರ ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಟಾಟಾ ಏಸಿ ಸೇರಿದಂತೆ ವಿವಿಧ ವಾಹನಗಳ ಮೂಲಕ ರಥೋತ್ಸವಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದರು. ಉತ್ತತ್ತಿ, ಬಾಳೆಹಣ್ಣು ಎಸೆದು ಕೃತಾರ್ತರಾದರು.
ಬಿಕನಳ್ಳಿ-ಮೈನಳ್ಳಿಯ ಉಜ್ಜಯಿನಿ ಶಾಖಾ ಮಠದ ಸಿದ್ಧೇಶ್ವರ ಶಿವಚಾರ್ಯ ಸ್ವಾಮೀಜಿ, ಹೂವಿನಹಡಗಲಿ ಗವಿಮಠದ ಶಾಖಾ ಮಠದ ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮುಖಂಡ ಬಸವರಾಜ ಪುರದ್, ದೇವಸ್ಥಾನ ಸಮಿತಿಯ ಅಧ್ಯಕ್ಷ ಗವಿಸಿದ್ದಯ್ಯ ಹಿರೇಮಠ, ಉಪಾಧ್ಯಕ್ಷ ಶಿವಣ್ಣ ಕೋಣಂಗಿ, ಕೆಂಚನಗೌಡ್ರ ದದೇಗಲ್, ಪ್ರಮುಖರಾದ ರಮೇಶ ಕವಲೂರು, ಗವಿಸಿದ್ದಪ್ಪ ಬೆಲ್ಲದ್, ಅಮರ್ ಸಿಂಗ್ ಇದ್ದರು.

Tags :