For the best experience, open
https://m.samyuktakarnataka.in
on your mobile browser.

ಮಹಾಬಲೇಶ್ವರ ಮಂದಿರಕ್ಕೆ ಸುಧಾಮೂರ್ತಿ ಭೇಟಿ

06:11 PM May 27, 2024 IST | Samyukta Karnataka
ಮಹಾಬಲೇಶ್ವರ ಮಂದಿರಕ್ಕೆ ಸುಧಾಮೂರ್ತಿ ಭೇಟಿ

ಗೋಕರ್ಣ: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಯವರು ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಸೋಮವಾರ ಮುಂಜಾನೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.
ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಮಹಾಬಲ ಉಪಾಧ್ಯ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ಮಂದಿರದ ವತಿಯಿಂದ ಪ್ರಸಾದ ನೀಡಿ ಗೌರವಿಸಲಾಯಿತು. ಸುಧಾ ಮೂರ್ತಿಯವರ ಕುಟುಂಬಸ್ಥರು ಹಾಗೂ ಮಂದಿರದ ಸಿಬ್ಬಂದಿ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಮಹಾಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.