For the best experience, open
https://m.samyuktakarnataka.in
on your mobile browser.

ಮುಡಾ ನಿವೇಶನ: ಹಿಂಪಡೆಯುವ ಪತ್ರ ನೀಡಿದ ಡಾ. ಯತೀಂದ್ರ

01:17 PM Oct 01, 2024 IST | Samyukta Karnataka
ಮುಡಾ ನಿವೇಶನ  ಹಿಂಪಡೆಯುವ ಪತ್ರ ನೀಡಿದ ಡಾ  ಯತೀಂದ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರು ಮುಡಾದಿಂದ ನೀಡಲಾದ 14 ಬದಲಿ ನಿವೇಶನಗಳನ್ನು ವಾಪಸ್ ನೀಡುವುದಾಗಿ ಬರೆದ ಪತ್ರವನ್ನು ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮುಡಾ ಆಯುಕ್ತರಿಗೆ ಸಲ್ಲಿಸಿದ್ದಾರೆ.

ಈ ಕುರಿತಂತೆ ಮುಡಾ ಆಯುಕ್ತ ರಘುನಂದನ್ ಮಾಹಿತಿ ನೀಡಿದ್ದು ಇಂದು ಬೆಳಗ್ಗೆ ಪಾರ್ವತಿ ಸಿದ್ದರಾಮಯ್ಯ ಅವರ ಪುತ್ರ ಎಂ ಎಲ್ ಸಿ ಡಾ ಯತಿಂದ್ರ ಕಚೇರಿಗೆ ಬಂದಿದ್ದರು. 14 ಸೈಟ್‌ಗಳನ್ನ ಹಿಂತಿರುಗಿಸುವ ಬಗ್ಗೆ ಪತ್ರ ನೀಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ. ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

Tags :