For the best experience, open
https://m.samyuktakarnataka.in
on your mobile browser.

ಮೆಟ್ರೋ ಮತ್ತಷ್ಟು ವಿಸ್ತಾರ ೩ನೇ ಹಂತ ಯೋಜನೆ ಸಿದ್ಧ

01:56 AM Feb 17, 2024 IST | Samyukta Karnataka
ಮೆಟ್ರೋ ಮತ್ತಷ್ಟು ವಿಸ್ತಾರ ೩ನೇ ಹಂತ ಯೋಜನೆ ಸಿದ್ಧ

ಜನರ ಜೀವನಾಡಿಯಾಗಿರುವ ಮೆಟ್ರೋ ಮಾರ್ಗವನ್ನು ಇನ್ನಷ್ಟು ವಿಸ್ತರಿಸಲು ಸರ್ಕಾರ ಮುಂದಾಗಿದೆ. ಮೆಟ್ರೋ ಮೂರನೇ ಹಂತದ ನಿರ್ಮಾಣಕ್ಕೆ ೧೫,೬೧೧ ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಸಿದ್ಧವಾಗಿದ್ದು, ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯಲಾಗುತ್ತಿದೆ. ಈ ಹಂತದಲ್ಲಿ ಸರ್ಜಾಪುರದಿಂದ ಅಗರ, ಕೋರಮಂಗಲ ಡೈರಿ ವೃತ್ತ, ಮೇಖ್ರಿ ವೃತ್ತ, ಮೂಲಕ ಹೆಬ್ಬಾಳವನ್ನು ಸಂಪರ್ಕಿಸುವ ಮಾರ್ಗ ನಿರ್ಮಾಣದ ಡಿಪಿಆರ್ ಕರಡು ಸಿದ್ಧಗೊಂಡಿದ್ದು, ಕೇಂದ್ರದ ಅನುಮೋದನೆಗೆ ಸಲ್ಲಿಸಲಾಗುತ್ತದೆ. ಮೆಟ್ರೋ ೨ ಮತ್ತು ೨ಎ ಹಂತದ ಯೋಜನೆ ೨೦೨೬ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ೭೪ ಕಿಲೋಮೀಟರ್ ಮಾರ್ಗಕ್ಕೆ ೨೦೨೫ರ ಮಾರ್ಚ್ ವೇಳೆಗೆ ೪೪ ಕಿಲೋಮೀಟರ್ ಸೇರ್ಪಡೆಯಾಗಲಿದೆ. ಬೆಂಗಳೂರು ಉಪನಗರ ರೈಲು ಯೋಜನೆ ಚುರುಕುಗೊಳಿಸಿ, ಕಾರಿಡಾರ್-೪ರ ಹೀಲಲಿಗೆಯಿಂದ ರಾಜಾನುಕುಂಟೆವರೆಗಿನ ೪೬.೨ ಕಿಲೋಮೀಟರ್ ಉದ್ದದ ಮಾರ್ಗದ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ.