For the best experience, open
https://m.samyuktakarnataka.in
on your mobile browser.

ಮೈದುನನಿಂದಲೇ ಅತ್ತಿಗೆ, ಇಬ್ಬರು ಮಕ್ಕಳ ಹತ್ಯೆ

01:22 PM Nov 04, 2023 IST | Samyukta Karnataka
ಮೈದುನನಿಂದಲೇ ಅತ್ತಿಗೆ  ಇಬ್ಬರು ಮಕ್ಕಳ ಹತ್ಯೆ

ಹಾನಗಲ್ಲ: ಹಾನಗಲ್ಲ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಮೈದುನನೊಬ್ಬ ಅತ್ತಿಗೆ ಹಾಗೂ ಆಕೆಯ ಇಬ್ಬರ ಮಕ್ಕಳನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದ ಭೀಕರ ಘಟನೆ ನಡೆದಿದೆ.
ಹಾನಗಲ್‌ ತಾಲೂಕು ಯಳ್ಳೂರು ಗ್ರಾಮದಲ್ಲಿ ಕುಮಾರ್‌ ಮರಿಗೌಡ್ರ (35) ಎಂಬಾತನು ಅಣ್ಣನ ಹೆಂಡತಿ ಹಾಗೂ ಆತನ ಇಬ್ಬರು ಮಕ್ಕಳನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಗೀತಾ ಹೊನಗೌಡ್ರ ಮರಿಗೌಡ್ರ (35), ಅಕುಲ್‌ ಹೊನಗೌಡ್ರ ಮರಿಗೌಡ್ರ (10) ಹಾಗೂ ಅಂಕಿತಾ ಹೊನ್ನಗೌಡ ಮರಿಗೌಡ್ರ (8) ಮೃತರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ರಾತ್ರಿ 2 ರಿಂದ 3 ಗಂಟೆ ವೇಳೆಗೆ ಹತ್ಯೆ ಮಾಡಲಾಗಿದೆ. ಆರೋಪಿಯ ಬಂಧನಕ್ಕೆ ವಿಶೇಷ ತನಿಖಾ ತಂಡ ರಚಿಸಲಾಗಿದೆ.
: ಶಿವಕುಮಾರ್ ಗುಣಾರೆ, ಎಸ್ಪಿ ಹಾವೇರಿ.