For the best experience, open
https://m.samyuktakarnataka.in
on your mobile browser.

ಮೊದಲು ನಿಮ್ಮ ಸ್ಥಾನ, ಸರ್ಕಾರದ ಭದ್ರತೆಯ ಬಗ್ಗೆ ಯೋಚಿಸಿ

01:00 PM Sep 19, 2024 IST | Samyukta Karnataka
ಮೊದಲು ನಿಮ್ಮ ಸ್ಥಾನ  ಸರ್ಕಾರದ ಭದ್ರತೆಯ ಬಗ್ಗೆ ಯೋಚಿಸಿ

ಬೆಂಗಳೂರು: ಮ್ಮ ಪಕ್ಷದ ಹಿತೈಷಿಗಳು ಮುಖ್ಯಮಂತ್ರಿ ಹುದ್ದೆಗಾಗಿ ನಿಮ್ಮ ವರಿಷ್ಠ ಮಂಡಳಿಯ ಕದ ತಟ್ಟುತ್ತಿರುವುದು ನಿತ್ಯ ಚರ್ಚೆಯಲ್ಲಿರುವ ಸುದ್ದಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಮಾನ್ಯ ಸಿದ್ದರಾಮಯ್ಯನವರೇ, ಮೋದಿಜೀ ಅವರ ಸರ್ಕಾರದ ಸುಭದ್ರತೆ ಕುರಿತ ನಿಮ್ಮ ಗ್ರಹಿಕೆ ಹಾಗೂ ವ್ಯಾಖ್ಯಾನ "ನವಿಲು ಕುಣಿಯಿತೆಂದು ಕೆಂಭೂತ ಪುಕ್ಕ ತರೆದುಕೊಂಡಿದಂತಾಗಿದೆ".
ಅಸ್ಥಿರಗೊಳ್ಳುತ್ತಿರುವ ನಿಮ್ಮ ಸ್ಥಾನದ ಸ್ಥಿತಿಯ ಲೆಕ್ಕಾಚಾರದಲ್ಲಿ ಮುಳುಗಿರುವ ನಿಮ್ಮ ಪಕ್ಷದ ಹಿತೈಷಿಗಳು "BioData" ಸಿದ್ಧಪಡಿಸಿಕೊಂಡು ಮುಖ್ಯಮಂತ್ರಿ ಹುದ್ದೆಗಾಗಿ ನಿಮ್ಮ ವರಿಷ್ಠ ಮಂಡಳಿಯ ಕದ ತಟ್ಟುತ್ತಿರುವುದು ನಿತ್ಯ ಚರ್ಚೆಯಲ್ಲಿರುವ ಸುದ್ದಿಯಾಗಿದೆ, ಕೆಲವರು ಈ ಕುರಿತು ಮಾಧ್ಯಮಗಳ ಮೂಲಕ ಹಕ್ಕು ಮಂಡಿಸಿದ್ದಾರೆ.
ಇದರಿಂದ ವಿಚಲಿತಗೊಂಡಿರುವ ನೀವು ಮೇಲಿಂದ ಮೇಲೆ ನನ್ನ ಸ್ಥಾನ ಅಬಾಧಿತ, ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನು ನೀಡುತ್ತಲೇ ಇದ್ದೀರಿ, ಈ ಹೇಳಿಕೆ ನಿಮ್ಮ ಮನಸ್ಸಿನಲ್ಲಿ ಉದ್ಭವವಾಗಿರುವ ಅಸ್ಥಿರ ಸ್ಥಿತಿಯನ್ನು ಬಿಂಬಿಸುತ್ತದೆ. ಮೋದಿ ಜೀ ಸರ್ಕಾರದ ಅವಧಿಯ ಬಗ್ಗೆ ಚಿಂತಿಸುವ ಮೊದಲು ನಿಮ್ಮ ಸ್ಥಾನ ಹಾಗೂ ನಿಮ್ಮ ಸರ್ಕಾರದ ಭದ್ರತೆಯ ಬಗ್ಗೆ ಯೋಚಿಸಿ. ಮಾನ್ಯ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಈ ಅವಧಿಯೂ ಪೂರೈಸುತ್ತದೆ, ಮತ್ತೊಂದು ಅವಧಿಗೂ ಚಾರಿತ್ರಿಕ ಗೆಲುವು ಸಾಧಿಸಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ನಂ1 ಸ್ಥಾನಕ್ಕೆ ತಂದು ನಿಲ್ಲಿಸಲಿದೆ. ಇದು ಶತಕೋಟಿ ಭಾರತೀಯರ ಆಶೋತ್ತರ ಹಾಗೂ ಸೂರ್ಯನ ಪ್ರಖರ ಬೆಳಕಿನಷ್ಟೇ ಸುಸ್ಪಷ್ಟ ಎಂದಿದ್ದಾರೆ.

Tags :