For the best experience, open
https://m.samyuktakarnataka.in
on your mobile browser.

ಮೋದಿ ಯೋಜನೆಗಳ ಫಲವನ್ನು ಪಡೆಯದ ಮನೆಗಳಿಲ್ಲ

03:34 PM Mar 05, 2024 IST | Samyukta Karnataka
ಮೋದಿ ಯೋಜನೆಗಳ ಫಲವನ್ನು ಪಡೆಯದ ಮನೆಗಳಿಲ್ಲ

ಬೆಳಗಾವಿ(ಚಿಕ್ಕೋಡಿ): ನರೇಂದ್ರ ಮೋದಿಯವರ ಯೋಜನೆಗಳ ಫಲವನ್ನು ಪಡೆಯದ ಮನೆಗಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಅವರು ಚಿಕ್ಕೋಡಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿರುವ ಅವರು ಬಿಜೆಪಿ ಪಕ್ಷದ ಆಧಾರ ಸ್ಥಂಭಗಳೇ ನಮ್ಮ ಬೂತ್ ಮಟ್ಟದ ಕಾರ್ಯಕರ್ತರು. ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳ ಫಲವನ್ನು ಪಡೆಯದ ಮನೆಗಳಿಲ್ಲ, ಪ್ರತಿ ಮನೆಗಳಲ್ಲೂ ಒಂದಿಲ್ಲೊಂದು ಮಹತ್ವದ ಯೋಜನೆಗಳು ತಲುಪಿವೆ, ಅವುಗಳನ್ನು ತಲುಪಿಸುವಲ್ಲಿ ಯಶಸ್ವೀ ಕೆಲಸ ಮಾಡಿದ ಕೀರ್ತಿ ಬೂತ್ ಮಟ್ಟದ ಕಾರ್ಯಕರ್ತರಿಗೆ ಸಲ್ಲುತ್ತದೆ. ರಾಜ್ಯದಲ್ಲಿರುವ ಜನವಿರೋಧಿ, ರೈತ ವಿರೋಧಿ ಹಾಗೂ ರಾಷ್ಟ್ರವಿರೋಧಿ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಜನರ ಮುಂದಿಟ್ಟು, ನಮ್ಮ ಮೋದಿ ಜೀ ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳು ಹಾಗೂ ಸಾಧನೆಗಳನ್ನು ಮನೆ ಮನೆಗಳಿಗೆ ತಲುಪಿಸಿ, ಬೂತ್ ಮಟ್ಟದಲ್ಲಿ ಈ ದಿನದಿಂದಲೇ ಒಂದೇ ಒಂದು ದಿನವೂ ವಿರಮಿಸದೇ ಚುನಾವಣೆ ಮುಗಿಯುವವರೆಗೂ ಸಮರ ಸೇನಾನಿಗಳಂತೆ ಕಾರ್ಯ ನಿರ್ವಹಿಸಲು ಕರೆ ನೀಡಿದ್ದಾರೆ.