ಮೋದಿ, ಷಾ ಕೈಗೊಂಬೆಯಾದ ರಾಜ್ಯಪಾಲರಿಂದ ಸಂವಿಧಾನ ಹತ್ಯೆ
ಕೊಪ್ಪಳ: ರಾಜ್ಯಪಾಲರು ಪ್ರಾಸಿಕ್ಯೂಷನಗೆ ಅನುಮತಿ ನೀಡಿದ್ದಾರೆ. ಈ ಬಗ್ಗೆ ನಮಗೆ ಅನುಮಾನ ಇತ್ತು. ರಾಜ್ಯಪಾಲರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಕೈಗೊಂಬೆ ಆಗಿದ್ದಾರೆ. ಈ ಮೂಲಕ ಸಂವಿಧಾನದ ಹತ್ಯೆ ಮಾಡಲು ಹೊರಟಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲ್ಲೂಕಿನ ಮುನಿರಾಬಾದ್ ಬಳಿಯ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರಾಸಿಕ್ಯೂಷನಗೆ ನೀಡಿದ ರಾಜ್ಯಪಾಲರು ೧೩೬ ಶಾಸಕರ ಬಲ ಹೊಂದಿದ ಸರ್ಕಾರವನ್ನು ಅಸ್ತಿರ ಗೊಳಿಸುವ ಯೋಜನೆಯಾಗಿದೆ. ಮುಡಾದಿಂದ ರಾಜ್ಯ ಸರ್ಕಾರದ ಶೇ. ೫೦-೫೦ ಕಾನೂನು ಅಡಿ ಸೈಟ್ ಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಶೇ.೩೮ರಷ್ಟು ಮಾತ್ರ ಸೈಟ್ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಸೇರಿ ಬಿಜೆಪಿಯವರ ವಿರುದ್ಧ ನೇರವಾಗಿ ಮಾತನಾಡಿದ್ದಕ್ಕೆ ಸಿದ್ದರಾಮಯ್ಯಗೆ ಶಿಕ್ಷೆ ಕೊಡಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ನೀಡುವುದರ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಕ್ಕೆ ಸಹಿಸಲಾಗುತ್ತಿಲ್ಲ. ಡಿ.ಕೆ.ಶಿವಕುಮಾರ ಸಂಘಟನಾ ಶಕ್ತಿಯನ್ನು ಸಹಿಸಲಾಗಿಲ್ಲ. ಇದು ೧೦೦ಕ್ಕೆ ೧೦೦ರಷ್ಟು ರಾಜಕೀಯ ಷಡ್ಯಂತ್ರವಾಗಿದೆ. ಸಿಎಂ ಇರುತ್ತೇವೆ. ಕಾನೂನು ಹೋರಾಟ ಮಾಡಿ, ಗೆದ್ದೆ ಗೆಲ್ಲುತ್ತೇವೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರು ರಾಜಕೀಯ ಮಾಡುತ್ತಿದ್ದು, ರಾಜ್ಯಪಾಲರು ರಾಜ್ಯವನ್ನು ಬಿಟ್ಟು ಹೋಗಬೇಕು ಎಂದರು.