For the best experience, open
https://m.samyuktakarnataka.in
on your mobile browser.

ಯಾರಿಟ್ಟರೀ ಈ ಕಪ್ಪು⚫️…..

10:59 AM Jul 29, 2024 IST | Samyukta Karnataka
ಯಾರಿಟ್ಟರೀ ಈ ಕಪ್ಪು⚫️…

ಮಜಾವಾದಿಯ 40 ವರ್ಷಗಳ ಹಿನ್ನಲೆ ಕೆದಕಿದರೆ, ಮುಡಾದಂತೆ ಗಬ್ಬು ನಾರುತ್ತದೆ.

ಬೆಂಗಳೂರು: ಒಂದಲ್ಲ ಎರಡಲ್ಲ ಮೈ ತುಂಬಾ ಭ್ರಷ್ಟಾಚಾರದ ಕಪ್ಪು ಚುಕ್ಕಿಗಳೇ ತುಂಬಿವೆ, ಯಾರಿಟ್ಟರೀ ಈ ಕಪ್ಪು ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಅವರೇ ಇಟ್ಟುಕೊಂಡು ಭ್ರಷ್ಟ ಚುಕ್ಕಿಗಳಿವು:

⚫️ವಜ್ರಖಚಿತ ಹ್ಯೂಬ್ಲಾಟ್ ವಾಚ್ ಪಡೆದಿದ್ದು
⚫️ಆರ್ಕಾವತಿ ಲೇಔಟ್‌ ಡಿನೋಟಿಫೈ ಮಾಡಿದ್ದು
⚫️ಕೃಷಿ ಭಾಗ್ಯದಲ್ಲಿ ನೂರಾರು ಕೋಟಿ ಕಬಳಿಸಿದ್ದು
⚫️ಅನ್ನಭಾಗ್ಯದಲ್ಲಿ ಸಾವಿರಾರು ಕೋಟಿ ಗುಳಂ ಮಾಡಿದ್ದು
⚫️ಇಂದಿರಾ ಕ್ಯಾಂಟೀನ್‌ನಲ್ಲೂ ಹಗರಣದಿಂದ ಗಳಿಸಿದ್ದು
⚫️ಹಗರಣ ಮುಚ್ಚಿಕೊಳ್ಳಲು ಲೋಕಾಯುಕ್ತ ಮುಚ್ಚಿದ್ದು
⚫️ವಾಲ್ಮೀಕಿ ನಿಗಮದ ಬಹುಕೋಟಿ ರೂಪಾಯಿ ತಿಂದಿದ್ದು
⚫️ಮುಡಾದಲ್ಲಿ ಪ್ರಭಾವ ಬಳಸಿ ಹೈಟೆಕ್ ಸೈಟು ಪಡೆದಿದ್ದು
⚫️SIT ಕೈಗೊಂಬೆ ಮಾಡಿಕೊಂಡು ಕ್ಲೀನ್‌ ಚಿಟ್‌ ಕೊಡಿಸಿದ್ದು

ಭ್ರಷ್ಟಾಚಾರದ ಪಿತಮಹಾ ಸಿದ್ದರಾಮಯ್ಯ ಅವರೇ, ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳಲು ಆತ್ಮಸಾಕ್ಷಿ ಅದ್ಹೇಗೆ ಒಪ್ಪಿಕೊಳ್ಳುತ್ತಿದೆ? ಮಜಾವಾದಿಯ 40 ವರ್ಷಗಳ ಹಿನ್ನಲೆ ಕೆದಕಿದರೆ, ಮುಡಾದಂತೆ ಗಬ್ಬು ನಾರುತ್ತದೆ. ಮೊದಲು ರಾಜೀನಾಮೆ ಕೊಟ್ಟು ಸಿಬಿಐ ತನಿಖೆ ಎದುರಿಸಿ ಸತ್ಯಹರಿಶ್ಚಂದ್ರರೆಂದು ಸಾಬೀತುಪಡಿಸಿ! ಎಂದಿದ್ದಾರೆ.