For the best experience, open
https://m.samyuktakarnataka.in
on your mobile browser.

ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ಅಸ್ತಂಗತ

05:50 PM Dec 10, 2023 IST | Samyukta Karnataka
ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ಅಸ್ತಂಗತ

ಕೊಪ್ಪಳ(ಕುಕನೂರು): ಪಟ್ಟಣದ ಹಿರಿಯ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ(೮೪) ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ನಿಧನರಾದರು.
ಬಾಬಣ್ಣ ಕಲ್ಮನಿ ಅವರಿಗೆ ೨೦೨೧-೨೨ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಒಲಿದು ಬಂದಿತ್ತು. ಅವರು ಮುಡಿಗೇರಿಸಿಕೊಳ್ಳುವ ಮೊದಲೇ ಅಸ್ತಂಗತರಾಗಿದ್ದು, ರಂಗಭೂಮಿಗೆ ತುಂಬರಾದ ನಷ್ಟವಾಗಿದೆ.
ಬಾಬಣ್ಣ ಕಲ್ಮನಿ ೨-೧೧-೧೯೩೪ರಲ್ಲಿ ಜನಿಸಿದ್ದರು. ಹತ್ತನೇ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶಿಸಿ ಸತತ ೭೭ ವರ್ಷ ಬಣ್ಣಹಚ್ಚಿದ ಹಿರಿಮೆ ಅವರದ್ದು. ಇಳಿವಯಸ್ಸಿನಲ್ಲಿಯೂ ಖಡಕ್ ಆಗಿ ರಂಗಭೂಮಿಯಲ್ಲಿ ನಟಿಸುತ್ತಿದ್ದ ಬಾಬಣ್ಣ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು. ಇವರ ಇಡೀ ಕುಟುಂಬವೇ ರಂಗಭೂಮಿಗೆ ಮೀಸಲು.