ರಾಂಪುರ ಮೇಘಸ್ಫೋಟ: ಗಡಿ ಪ್ರದೇಶದಲ್ಲಿ ಕನಿಷ್ಠ 20 ಮಂದಿ ನಾಪತ್ತೆ
11:04 AM Aug 01, 2024 IST
|
Samyukta Karnataka
ರಾಂಪುರ: ಶಿಮ್ಲಾ ಜಿಲ್ಲೆಗಳ ಗಡಿಯಲ್ಲಿರುವ ರಾಂಪುರ್ ಬಳಿ ಗುರುವಾರ ಬೆಳಗ್ಗೆ ಸಮೇಜ್ ಖಾಡ್ನಲ್ಲಿ ಮೇಘಸ್ಫೋಟ ಸಂಭವಿಸಿದೆ.
ಸರ್ಕಾರಿ ಶಾಲೆ ಸೇರಿದಂತೆ ಹಲವು ಕಟ್ಟಡಗಳು ಹಾನಿಗೀಡಾಗಿವೆ, ಈ ಪ್ರದೇಶದಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ಸಂಪರ್ಕದಲ್ಲಿ ವಿಳಂಬವಾಗಿದೆ. ಈ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಮೇಘಸ್ಫೋಟದ ಘಟನೆಗಳ ನಂತರ ಎರಡು ಮೃತದೇಹಗಳು ಪತ್ತೆಯಾಗಿವೆ ಮತ್ತು 20 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. SDRF ತಂಡಗಳು ಪೀಡಿತ ಸ್ಥಳಗಳನ್ನು ತಲುಪಿವೆ ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಏತನ್ಮಧ್ಯೆ, ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು ಅವರು ಶಿಮ್ಲಾ ಜಿಲ್ಲೆಯ ರಾಮ್ಪುರ ಪ್ರದೇಶದ ಸಮೇಜ್ ಖಾಡ್ನಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಪರಿಶೀಲನೆಗಾಗಿ ತುರ್ತು ಸಭೆ ನಡೆಸಿದ್ದಾರೆ.
Next Article