For the best experience, open
https://m.samyuktakarnataka.in
on your mobile browser.

ರಾಜಶೇಖರ ಹಿಟ್ನಾಳ್ ಡಿಪಾಜಿಟ್ ಕಳೆದುಕೊಳ್ಳುತ್ತಾರೆ

03:45 PM Apr 14, 2024 IST | Samyukta Karnataka
ರಾಜಶೇಖರ ಹಿಟ್ನಾಳ್ ಡಿಪಾಜಿಟ್ ಕಳೆದುಕೊಳ್ಳುತ್ತಾರೆ

ಕುಕನೂರು: ಕೊಪ್ಪಳ ಲೋಕಸಭೆಗೆ ಸ್ಪರ್ಧೆ ಮಾಡಿರುವ ರಾಜಶೇಖರ ಹಿಟ್ನಾಳ್ ಅವರನ್ನು ಬಿಜೆಪಿ ಅವರು ಸೋಲಿಸುವುದು ಬೇಕಾಗಿಲ್ಲ, ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಸೋಲಿಸುತ್ತಾರೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ವ್ಯಂಗ್ಯವಾಡಿದರು.
ತಾಲೂಕಿನ ಮಂಗಳೂರು ಗ್ರಾಮದ ಶ್ರೀಮಂಗೇಶ್ವರ ಮಂಟಪದ ಆವರಣದಲ್ಲಿ ನಡೆದ ಕೊಪ್ಪಳ ಲೋಕಸಭಾ ಚುನಾವಣೆ ನಿಮಿತ್ತ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮಹಾಶಕ್ತಿ ಕೇಂದ್ರಗಳ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಕಟ್ಟಿಬೆಳೆಸಿದವರು ಈಶಣ್ಣ ಗುಳಗಣ್ಣವರ್. ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮಂತ್ರಿ ಆಗಬೇಕೆಂದು ಗೆದ್ದಿದ್ದಾರೆ. ಆದರೆ, ಮಂತ್ರಿ ಸ್ಥಾನ ಸಿಗದಿದ್ದಕ್ಕೆ ವಿಧಾನಸಭೆ ಕಲಾಪ ನಡೆಯುವಾಗ ಪ್ರತಿ ವಿಷಯಕ್ಕೂ ಗಲಾಟೆ ಮಾಡುತ್ತಾ ಬಂದಿದ್ದಾರೆ. ಮುಖ್ಯಮಂತ್ರಿಗೆ ಕಸಿವಿಸಿ ಆಗುವಂತೆ ಮಾಡಿದ್ದಾರೆ. ರಾಯರೆಡ್ಡಿ ಅವರ ಟಾರ್ಗೆಟ್ ಶಿವರಾಜ ತಂಗಡಗಿ ಅವರನ್ನು ಕೇಳಗಿಳಿಸಬೇಕೆನ್ನುವುದಾಗಿದೆ. ಬಿಜೆಪಿಯಿಂದ ಡಾ.ಬಸವರಾಜ ಅವರ ಸಮಾಜ ಸೇವೆ ಗುರುತಿಸಿ ಲೋಕಸಭೆಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಕೊಪ್ಪಳದಲ್ಲಿ ಕುಳಿತು ಮೈಂಡ್ ಗೆಮ್ ಆಡುತ್ತಿದ್ದಾರೆ. ಮಂಗಳೂರು ಸಭೆ ನೋಡಿದರೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಡಿಪಾಜಿಟ್ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.