For the best experience, open
https://m.samyuktakarnataka.in
on your mobile browser.

ರಾಜ್ಯದ ಗಲಾಟೆಯಲ್ಲಿ ಕೇರಳ ಮುಸ್ಲಿಂರ ಕೈವಾಡ: ಆರೋಪ

09:53 PM Sep 16, 2024 IST | Samyukta Karnataka
ರಾಜ್ಯದ ಗಲಾಟೆಯಲ್ಲಿ ಕೇರಳ ಮುಸ್ಲಿಂರ ಕೈವಾಡ  ಆರೋಪ

ಶಿವಮೊಗ್ಗ: ರಾಜ್ಯದಲ್ಲಿ ನಡೆಯುವ ಗಣೇಶ ಗಲಾಟೆಗಳಲ್ಲಿ ಕೇರಳ ರಾಜ್ಯದ ರಾಷ್ಟ್ರದ್ರೋಹಿ ಮುಸ್ಲಿಂರ ಕೈವಾಡವಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಹಾಗೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ಸೇರಿದಂತೆ ರಾಜ್ಯದ ಹಲವು ಕಡೆ ರಾಷ್ಟ್ರದ್ರೋಹಿ ಮುಸ್ಲಿಂರಿಂದ ಗಲಾಟೆಗಳು ನಡೆಯುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ನಾಗಮಂಗಲದ ಘಟನೆಯೇ ನಿದರ್ಶನ. ಪಿಎಫ್‌ಐ, ಕೆಎಫ್‌ಡಿಯಂತಹ ನಿಷೇಧಿತ ರಾಷ್ಟ್ರದ್ರೋಹಿ ಸಂಸ್ಥೆಗಳು ಇಂತಹ ಘಟನೆಗಳಿಗೆ ಕೈಜೋಡಿಸುತ್ತಿವೆ. ಮುಖ್ಯವಾಗಿ ಕೇರಳ ಮೂಲದ ಮುಸ್ಲಿಂರು ರಾಜ್ಯದಲ್ಲಿ ಬೀಡುಬಿಟ್ಟು ಇಂತಹ ಘಟನೆಗಳಿಗೆ ಕಾರಣರಾಗಿದ್ದಾರೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿಯವರೇ ಘಟನೆಯನ್ನು ಖಂಡಿಸಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಇದನ್ನು ಹಗುರವಾಗಿ ತೆಗೆದುಕೊಂಡಿದೆ. ಗೃಹಮಂತ್ರಿ ಸೇರಿದಂತೆ ಚೆಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿಯಂತವರು ಇದನ್ನು ಸಣ್ಣ ಘಟನೆ ಎನ್ನುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಗಲಭೆಗಳಿಗೆ ಕೇರಳ ಮುಸ್ಲಿಂರ ಜೊತೆಯೇ ವಿದೇಶದ ಕೈವಾಡದ ಶಂಕೆಯೂ ಇದೆ ಎಂದರು.

Tags :