For the best experience, open
https://m.samyuktakarnataka.in
on your mobile browser.

ರಾಜ್ಯದ 8 ಮಂದಿಗೆ ಕೊರೊನಾ

06:01 PM Dec 25, 2023 IST | Samyukta Karnataka
ರಾಜ್ಯದ 8 ಮಂದಿಗೆ ಕೊರೊನಾ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ JN.1 ವೈರಸ್‌ ಮೈಸೂರಿನ 8 ಜನರಲ್ಲಿ ಪತ್ತೆಯಾಗಿದೆ. ಇದರಿಂದ ರಾಜ್ಯಕ್ಕೆ ಜೆ.ಎನ್‌ 1 ಆತಂಕ ಎದುರಾಗಿದೆ. 8 ಜನರ ಸೋಂಕಿತರ ಸಂಪರ್ಕಿತರ ಮಾಹಿತಿ ಕಲೆ ಹಾಕಲಾಗುತ್ತಿದೆ.
ತೀವ್ರ ಜ್ವರ, ಒಣ ಕೆಮ್ಮು, ಗಂಟಲು ಕೆರೆತ, ಉಸಿರಾಟಕ್ಕೆ ತೊಂದರೆಯಿಂದ ಬಳಲುವವರು ಸೀನಿದಾಗ, ಸಂಪರ್ಕ ಬೆಳೆದಾಗ, ಸೋಂಕಿತ ವ್ಯಕ್ತಿಗೆ ತಗುಲಿದ ವಸ್ತುವಿನಿಂದ, ಗುಂಪಾಗಿ ಸೇರುವುದರಿಂದ ಹರಡುತ್ತದೆ. ಮಾಸ್ಕ್ ಧರಿಸಿ, ಕೈ ತೊಳೆಯುವುದು, ಸೋಂಕಿತರಿಂದ ಅಂತರ ಕಾಯ್ದುಕೊಳ್ಳುವುದು, ಸೀನುವಾಗ ಕರವಸ್ತ್ರವನ್ನು ಅಡ್ಡಲಾಗಿ ಹಿಡಿಯುವುದರಿಂದ ಸೋಂಕು ನಿಯಂತ್ರಣ ಮಾಡಬಹುದಾಗಿದೆ.