For the best experience, open
https://m.samyuktakarnataka.in
on your mobile browser.

ರಾಜ್ಯ ಸರ್ಕಾರ ನಡೆಸುತ್ತಿರೊದು ಸಿದ್ದು ಅಲ್ಲ ಡಿಕೆಶಿ

07:12 PM Nov 26, 2023 IST | Samyukta Karnataka
ರಾಜ್ಯ ಸರ್ಕಾರ ನಡೆಸುತ್ತಿರೊದು ಸಿದ್ದು ಅಲ್ಲ ಡಿಕೆಶಿ

ಬಾಗಲಕೋಟೆ: ಡಿಸಿಎಂ ಡಿ.ಕೆ. ಶಿವಕುಮಾರ ಅವರ ಮೇಲಿನ ಸಿಬಿಐ ತನಿಖೆಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಗಮನಿಸಿದರೆ ಸರ್ಕಾರವನ್ನು ಸಿದ್ದರಾಮಯ್ಯ ಅವರ ಬದಲಿಗೆ ಡಿಕೆಶಿ ಅವರೇ ನಡೆಸುತ್ತಿರುವುದು ಗೊತ್ತಾಗುತ್ತದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರು ಹಿರಿಯರು, ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆದರೆ ತನಿಖೆ ಹಂತದಲ್ಲಿದ್ದಾಗ ಸೋಲಾಗುವ ಭೀತಿಯಿಂದ ಪ್ರಕರಣ ಹಿಂಪಡೆದಿರುವುದು ಅವರಿಗೆ ಶೋಭೆ ತರುವ ವಿಚಾರವಲ್ಲ ಎಂದರು. ಸಿದ್ದರಾಮಯ್ಯ ಅವರ ಬಗ್ಗೆಯೂ ಗೌರವವಿತ್ತು. ಆದರೆ ತನಿಖೆಗೆ ಬ್ರೇಕ್ ಹಾಕಲು ಹೊರಟಿರುವುದನ್ನು ನೋಡಿದರೆ ಡಿ.ಕೆ.ಶಿವಕುಮಾರ ಅವರೇ ಸರ್ಕಾರ ನಡೆಸುತ್ತಿದ್ದಾರೆ ಎಂದು ಅನಿಸುತ್ತದೆ ಎಂದು ಹೇಳಿದರು.