ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಲಾರಿ - ಸ್ಕೂಟಿ ಅಪಘಾತದಲ್ಲಿ ಬೈಕ್ ಸವಾರ ಸಾವು

04:19 PM Oct 04, 2024 IST | Samyukta Karnataka

ಇಳಕಲ್ : ಸೊಲ್ಲಾಪುರ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ೫೦ ರ ಗುಗಲಮರಿ ಗ್ರಾಮದ ಬಳಿ ನಡೆದ ಲಾರಿ- ಸ್ಕೂಟಿ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಮರಿಗೌಡ ಹುಲಸಗೇರಿ ತನ್ನ ತಂದೆ ರಾಮಣ್ಣನ ಜೊತೆಗೆ ಗುಗಲಮರಿ ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ದರ್ಶನ ಮುಗಿಸಿಕೊಂಡು ಮರಳಿ ಇಳಕಲ್ ಗೆ ತೆರಳುವಾಗ ಕುಷ್ಟಗಿ ಕಡೆಯಿಂದ ಬಂದ ಲಾರಿ ಸ್ಕೂಟಿಗೆ ಹಾಯ್ದ ಕಾರಣ ಇಬ್ಬರೂ ಅಲ್ಲಿ ಬಿದ್ದು ಬಲವಾದ ಗಾಯಗಳಿಂದ ಪರದಾಡ ತೊಡಗಿದರು. ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ ಐ ಮಲ್ಲು ಸತ್ತಿಗೊಂಡರ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮರಿಗೌಡನನ್ನು ಬಾಗಲಕೋಟ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಜೀವನ್ಮರಣದ ಹೋರಾಟ ನಡೆಸಿದ ಮರಿಗೌಡ ಗುರುವಾರದಂದು ಮೃತಪಟ್ಟ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ಲಾರಿ ಚಾಲಕನನ್ನು ಬಂಧಿಸಲಾಗಿದೆ ವಿಚಾರಣೆ ನಡೆದಿದೆ.

Tags :
#ಅಪಘಾತ#ಬಾಗಲಕೋಟೆ
Next Article