For the best experience, open
https://m.samyuktakarnataka.in
on your mobile browser.

ವಯನಾಡ್ ಭೂಕುಸಿತ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ರಾಹುಲ್‌ ಮನವಿ

02:11 PM Aug 07, 2024 IST | Samyukta Karnataka
ವಯನಾಡ್ ಭೂಕುಸಿತ  ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ರಾಹುಲ್‌ ಮನವಿ

ನವದೆಹಲಿ: ವಯನಾಡ್ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮನವಿ ಮಾಡಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಮಾತನಾಡಿರುವ ಅವರು ನಾನು ಕೆಲವು ದಿನಗಳ ಹಿಂದೆ ನನ್ನ ಸಹೋದರಿಯೊಂದಿಗೆ ವಯನಾಡ್‌ಗೆ ಭೇಟಿ ನೀಡಿದ್ದೆ ಮತ್ತು ಈ ದುರಂತದ ಪರಿಣಾಮದ ವಿನಾಶ, ನೋವು ಮತ್ತು ಸಂಕಟವನ್ನು ನೇರವಾಗಿ ನೋಡಿದೆ. 200 ಕ್ಕೂ ಹೆಚ್ಚು ಜನರು ಸತ್ತಿದ್ದಾರೆ ಮತ್ತು ಅನೇಕರು ಕಾಣೆಯಾಗಿದ್ದಾರೆ, ಆದರೆ ಅಂತಿಮವಾಗಿ ಸಾವುನೋವುಗಳ ಸಂಖ್ಯೆ 400 ಕ್ಕಿಂತ ಹೆಚ್ಚು ಎಂದು ನಿರೀಕ್ಷಿಸಲಾಗಿದೆ. ವಿವಿಧ ಇಲಾಖೆಗಳ ಕಾರ್ಯವೈಖರಿಯನ್ನು ಶ್ಲಾಘಿಸಲು ಬಯಸುತ್ತೇನೆ. ಎಲ್ಲ ಸಮುದಾಯದವರು ಒಗ್ಗೂಡಿ ಸಹಾಯ ಮಾಡಿರುವುದು ಸಂತಸ ತಂದಿದೆ. ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ, • ಸಮಗ್ರ ಪುನರ್ವಸತಿ ಪ್ಯಾಕೇಜ್ ಅನ್ನು ಒದಗಿಸಿ. • ಜನರು ಪಡೆಯುತ್ತಿರುವ ಪರಿಹಾರವನ್ನು ಹೆಚ್ಚಿಸಿ. • ವಯನಾಡ್ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಎಂದಿದ್ದಾರೆ.

Tags :