For the best experience, open
https://m.samyuktakarnataka.in
on your mobile browser.

ವಾಕರಸಾಸಂಗೆ ನೂತನ ಎಂಡಿ ಪ್ರಿಯಾಂಗಾ ಅಧಿಕಾರ ಸ್ವೀಕಾರ

05:35 PM Mar 18, 2024 IST | Samyukta Karnataka
ವಾಕರಸಾಸಂಗೆ ನೂತನ ಎಂಡಿ ಪ್ರಿಯಾಂಗಾ ಅಧಿಕಾರ ಸ್ವೀಕಾರ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಪ್ರಿಯಾಂಗಾ ಎಂ. ಅವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು.
ಈ ಹಿಂದಿನ ನಿರ್ದೇಶಕ ಭರತ್.ಎಸ್. ಅವರು ಗದಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಪ್ರಿಯಾಂಗಾ ಎಂ., ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಯನ್ನು ಅಲಂಕರಿಸಿದ್ದಾರೆ. ಇವರು, ೨೦೧೭ನೇ ಬ್ಯಾಚ್‌ನ ಕರ್ನಾಟಕ ಕೆಡರ್‌ನ ಅಧಿಕಾರಿಯಾಗಿದ್ದು, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ.