For the best experience, open
https://m.samyuktakarnataka.in
on your mobile browser.

ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ?

04:14 PM Jul 13, 2024 IST | Samyukta Karnataka
ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ? ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪ್ರಶ್ನಿಸಿದ್ದಾರೆ.
PSI ಅಭ್ಯರ್ಥಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು 545 PSI ಹುದ್ದೆಯ ಅಂತಿಮ ಅಂಕಪಟ್ಟಿಯನ್ನು KEA ಗೃಹ ಇಲಾಖೆಗೆ ಸಲ್ಲಿಸಿ 4 ತಿಂಗಳು ಕಳೆದರೂ, KSP ಇಲಾಖೆ ತಾತ್ಕಾಲಿಕ ಅಂಕಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ! ಇದು PSI ಅಭ್ಯರ್ಥಿಗಳಿಗೆ ತೀವ್ರ ತೊಂದರೆ ಉಂಟುಮಾಡಿದ್ದು, ಅವರು ತಮ್ಮ ಅಳಲನ್ನು ನನ್ನಲ್ಲಿ ತೋಡಿಕೊಂಡಿದ್ದಾರೆ!
ಸದರಿ ನೇಮಕಾತಿ ಆರಂಭಗೊಂಡು 4 ವರ್ಷ ಕಳೆದಿದೆ! ಇದರಿಂದ ವಿದ್ಯಾರ್ಥಿಗಳ ಜೀವನ ಅತಂತ್ರಗೊಂಡಿದೆ! ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ? ಗೃಹ ಸಚಿವರಾದ ಡಾ ಪರಮೇಶ್ವರ ಅವರೇ, ತಾವು ಶೀಘ್ರವೇ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡುವಂತೆ KSP ಇಲಾಖೆಗೆ ಸೂಚಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಬೇಕು! ಎಂದಿದ್ದಾರೆ.