For the best experience, open
https://m.samyuktakarnataka.in
on your mobile browser.

ವೇಳಾಪಟ್ಟಿ ಬದಲಿಸಿ ನಮ್ಮ ಕನ್ನಡಿಗರಿಗೆ ಅವಕಾಶ ಕಲ್ಪಿಸಿ

01:32 PM Aug 02, 2024 IST | Samyukta Karnataka
ವೇಳಾಪಟ್ಟಿ ಬದಲಿಸಿ ನಮ್ಮ ಕನ್ನಡಿಗರಿಗೆ ಅವಕಾಶ ಕಲ್ಪಿಸಿ

ಬೆಂಗಳೂರು: ಅವೈಜ್ಞಾನಿಕವಾದ ಪರೀಕ್ಷಾ ವೇಳಾಪಟ್ಟಿಯನ್ನು ಬದಲಿಸಿ ನಮ್ಮ ಕನ್ನಡ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿ. ತಿಂಗಳುಗಟ್ಟಲೆ ತಯಾರಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಬೇಡಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿರುವ ಪರೀಕ್ಷೆಗಳ ಫಲಿತಾಂಶವನ್ನು ಕೂಡಲೇ ಬಿಡುಗಡೆ ಮಾಡಿ ಹಾಗೂ ಫಲಿತಾಂಶ ವಿಳಂಬ ಆಗಿರುವುದಕ್ಕೆ ಸೂಕ್ತ ಕಾರಣ/ಸಮಜಾಯಿಷಿ ನೀಡಿ. ಸ್ವಹಿತಾಸಕ್ತಿಗಳಿಗೆ, ರಾಜಕೀಯ ಒತ್ತಡಕ್ಕೆ ಮಣಿದು ಫಲಿತಾಂಶ ಮುಂದೂಡುವುದು ಅಭ್ಯರ್ಥಿಗಳಿಗೆ ಮಾಡುವ ಅನ್ಯಾಯ ಎಂದಿದ್ದಾರೆ.