For the best experience, open
https://m.samyuktakarnataka.in
on your mobile browser.

ವೈದ್ಯರ ಮುಷ್ಕರ: ಚೇಳು ಕಡಿದವನಿಗೆ ಸಿಗದ ಔಷಧಿ, ಆಸ್ಪತ್ರೆ ಆವರಣದಲ್ಲಿ ಪರದಾಟ

12:54 PM Aug 17, 2024 IST | Samyukta Karnataka
ವೈದ್ಯರ ಮುಷ್ಕರ  ಚೇಳು ಕಡಿದವನಿಗೆ ಸಿಗದ ಔಷಧಿ  ಆಸ್ಪತ್ರೆ ಆವರಣದಲ್ಲಿ ಪರದಾಟ

ಬಾಗಲಕೋಟೆ: ವೈದ್ಯರ ಮುಷ್ಕರ ತಿಳಿಯದೆ ಆಸ್ಪತ್ರೆಗಳಿಗೆ ಆಗಮಿಸಿದ ರೋಗಿಗಳು ಪರದಾಡುತ್ತಿದ್ದಾರೆ. ಚೇಳುಕಡಿತಕ್ಕೆ ಒಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಔಷಧಿ ನೀಡದೆ ನಿರಾಕರಿಸಲಾಗಿದೆ.

ಕೆರಕಲಮಟ್ಟಿ ಗ್ರಾಮದ ಈಶ್ವರ ಕಡಿವಾಲ(೫೦) ಎಂಬುವರಿಗೆ ಚೇಳು ಕಡಿದಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಅವರಿಗೆ ಉಪಚಾರ ನೀಡಲಾಗುತ್ತಿದೆಯಾದರೂ ಔಧಿಯನ್ನು ಆಸ್ಪತ್ರೆಯಲ್ಲಿ ನೀಡಲು ನಿರಾಕರಿಸಲಾಗಿದೆ. ಔಷಧಿ ಬೇಕಿದ್ದರೆ ಹೊರಗಿನಿಂದ ತನ್ನಿ ಎಂದು ಸಿಬ್ಬಂದಿ ಹೇಳಿದ್ದಾರೆ.ಆದರೆ ವೈದ್ಯಕೀಯ ಸಿಬ್ಬಂದಿ ತುರ್ತಾಗಿ ಸ್ಪಂದಿಸಿ ಉತ್ತಮ ಚಿಕಿತ್ಸೆ ನೀಡಿದ್ದಾರೆ, ಮುಷ್ಕರ ಕಾರಣ ಔಷಧಿಯನ್ನು ಹೊರಗಿಂದ ತರಲು ಹೇಳಿದ್ದಾರೆ ಎಂದು ಈಶ್ವರ ತಿಳಿಸಿದರು. ಕೆರೂರು ಬಳಿಯ ಜಂಗವಾಡದಿಂದ ಆಗಮಿಸಿದ್ದ ೬೦ ವರ್ಷದ ಶಾಂತಮ್ಮ ತುಳಸಿಗೇರಿ ಅವರು ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಅವರಿಗೂ ಚಿಕಿತ್ಸೆ ಲಭಿಸದೆ ಆಸ್ಪತ್ರೆ ಆವರಣದಲ್ಲೊ ನರಳಾಡುತ್ತಿದ್ದ ಚಿತ್ರಣ ಕಂಡು ಬಂದಿತು. ತುರ್ತು ಚಿಕಿತ್ಸೆ ಹೊರತು ಎಲ್ಲ ಸೇವೆಗಳನ್ನು ಬಂದ್ ಮಾಡಲಾಗಿದೆ.

Tags :