ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವೈದ್ಯರ ಮುಷ್ಕರ: ಚೇಳು ಕಡಿದವನಿಗೆ ಸಿಗದ ಔಷಧಿ, ಆಸ್ಪತ್ರೆ ಆವರಣದಲ್ಲಿ ಪರದಾಟ

12:54 PM Aug 17, 2024 IST | Samyukta Karnataka

ಬಾಗಲಕೋಟೆ: ವೈದ್ಯರ ಮುಷ್ಕರ ತಿಳಿಯದೆ ಆಸ್ಪತ್ರೆಗಳಿಗೆ ಆಗಮಿಸಿದ ರೋಗಿಗಳು ಪರದಾಡುತ್ತಿದ್ದಾರೆ. ಚೇಳುಕಡಿತಕ್ಕೆ ಒಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಔಷಧಿ ನೀಡದೆ ನಿರಾಕರಿಸಲಾಗಿದೆ.

ಕೆರಕಲಮಟ್ಟಿ ಗ್ರಾಮದ ಈಶ್ವರ ಕಡಿವಾಲ(೫೦) ಎಂಬುವರಿಗೆ ಚೇಳು ಕಡಿದಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಅವರಿಗೆ ಉಪಚಾರ ನೀಡಲಾಗುತ್ತಿದೆಯಾದರೂ ಔಧಿಯನ್ನು ಆಸ್ಪತ್ರೆಯಲ್ಲಿ ನೀಡಲು ನಿರಾಕರಿಸಲಾಗಿದೆ. ಔಷಧಿ ಬೇಕಿದ್ದರೆ ಹೊರಗಿನಿಂದ ತನ್ನಿ ಎಂದು ಸಿಬ್ಬಂದಿ ಹೇಳಿದ್ದಾರೆ.ಆದರೆ ವೈದ್ಯಕೀಯ ಸಿಬ್ಬಂದಿ ತುರ್ತಾಗಿ ಸ್ಪಂದಿಸಿ ಉತ್ತಮ ಚಿಕಿತ್ಸೆ ನೀಡಿದ್ದಾರೆ, ಮುಷ್ಕರ ಕಾರಣ ಔಷಧಿಯನ್ನು ಹೊರಗಿಂದ ತರಲು ಹೇಳಿದ್ದಾರೆ ಎಂದು ಈಶ್ವರ ತಿಳಿಸಿದರು. ಕೆರೂರು ಬಳಿಯ ಜಂಗವಾಡದಿಂದ ಆಗಮಿಸಿದ್ದ ೬೦ ವರ್ಷದ ಶಾಂತಮ್ಮ ತುಳಸಿಗೇರಿ ಅವರು ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಅವರಿಗೂ ಚಿಕಿತ್ಸೆ ಲಭಿಸದೆ ಆಸ್ಪತ್ರೆ ಆವರಣದಲ್ಲೊ ನರಳಾಡುತ್ತಿದ್ದ ಚಿತ್ರಣ ಕಂಡು ಬಂದಿತು. ತುರ್ತು ಚಿಕಿತ್ಸೆ ಹೊರತು ಎಲ್ಲ ಸೇವೆಗಳನ್ನು ಬಂದ್ ಮಾಡಲಾಗಿದೆ.

Tags :
#JusticeForMoumita#KolkataDoctorDeath#samyuktakarnataka#ವೈದ್ಯರ ಮುಷ್ಕರ
Next Article