ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಶಾಸಕ ಸತೀಶ್ ಸೈಲ್ ಸ್ಥಾನ ಅನರ್ಹಕ್ಕೆ ಒತ್ತಾಯ

08:54 PM Oct 26, 2024 IST | Samyukta Karnataka

ಬೆಂಗಳೂರು :  ಸರ್ಕಾರ ಕೂಡಲೇ ಸತೀಶ್ ಸೈಲ್ ಅವ​ರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ಕೋರ್ಟ್ ಶಾಸಕ ಸತೀಶ್ ಸೈಲ್​ರನ್ನು ದೋಷಿ ಎಂದು ತೀರ್ಪು ಕೊಟ್ಟಿದೆ. ಇವತ್ತು ಏಳು ವರ್ಷ ಶಿಕ್ಷೆ ಪ್ರಕಟಿಸಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಎರಡು ವರ್ಷ ಶಿಕ್ಷೆಯಾದ್ರೆ ಶಾಸಕ ಸ್ಥಾನ ಉಳಿಯಲ್ಲ. ಹಾಗಾಗಿ ಈ ತಕ್ಷಣ ಅವರ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಸರ್ಕಾರ ಹಾಗೂ ಸ್ಪೀಕರ್ ಅವರಿಗೆ ಒತ್ತಾಯ ಮಾಡುತ್ತೇನೆ ಎಂದರು.

ಹಿಂದೂ ಹಬ್ಬಗಳಲ್ಲಿ ಮಾತ್ರ ಇವರ ಆರ್ಭಟ : ಹಿಂದೂ ಹಬ್ಬಗಳಿಗೆ ಮಾತ್ರ ನಿಯಮ ಹಾಕುತ್ತಾರೆ. ಪಟಾಕಿ ಹಚ್ಚೋದಿಕ್ಕೆ, ಗಣಪತಿ ಕೂರಿಸಲು ನಿಯಮ ಮಾಡ್ತಾರೆ. ಆದರೆ, ಬೆಳಗಿನಜಾವ 5 ಗಂಟೆಗೆ ಮಸೀದಿಗಳಲ್ಲಿ ಆಜಾನ್, ನಮಾಜ್ ಶುರುವಾಗುತ್ತದೆ. ಇದಕ್ಕೆ ಸರ್ಕಾರದ ನಿಯಮ ಅನ್ವಯ ಆಗೋದಿಲ್ವಾ?, ಹಿಂದೂ ಹಬ್ಬಗಳಿಗೆ ಮಾತ್ರ ಇವರ ಪುರುಷತ್ವ ಮತ್ತು ಆರ್ಭಟ ಇರುತ್ತದೆ.‌ ಪಟಾಕಿ ಸಿಡಿಸುವವರು ಸಿಡಿಸೇ ಸಿಡಿಸ್ತಾರೆ, ಯಾರೂ ಇವರ ಮಾತು ಕೇಳಲ್ಲ ಎಂದರು.

Tags :
#ಪ್ರಲ್ಹಾದಜೋಶಿ
Next Article