ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಶಿಷ್ಯ ಪರಿಗ್ರಹಣದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಕ್ತರು

08:30 PM Feb 22, 2024 IST | Samyukta Karnataka

ಶಿರಸಿ: ಶಿಷ್ಯ ಸ್ವೀಕಾರ ಮಹೋತ್ಸವದ ಅಧ್ಭುತ ಕ್ಷಣಕ್ಕೆ ಗುರುವಾರ ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮತ್ತು ಸ್ವರ್ಣವಲ್ಲೀ ಮಹಾಸಂಸ್ಥಾನ ಹಾಗೂ ಶಾಲ್ಮಲಾ ನದಿಯ ಪರಿಸರ ಮತ್ತು ಸಹಸ್ರಸಹಸ್ರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ೫೪ನೇ ಪೀಠಾಧಿಪತಿಗಳಾಗಿರುವ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ತಮ್ಮ ಉತ್ತರಾಧಿಕಾರಿ ಶಿಷ್ಯರನ್ನು ಸ್ವೀಕಾರ ಮಾಡಿ, ಶ್ರೀಮಠಕ್ಕೆ ೫೫ನೇ ಪೀಠಾಧಿಪತಿಗಳಾಗಿ ನಿಯುಕ್ತರಾದ ನೂತನ ಶ್ರೀಗಳಿಗೆ ಶ್ರೀ ಆನಂದ ಭೋದೇಂದ್ರ ಸರಸ್ವತೀ ಎಂದು ನಾಮಕರಣ ನಡೆಸುವ ಮೂಲಕ ಐತಿಹಾಸಿಕ ಕಾರ್ಯ ನೆರವೇರಿಸಿದರು.
ಯಲ್ಲಾಪುರ ಈರಾಪುರದ ಗಂಗೆಮನೆಯ ವೇ.ನಾಗರಾಜ ಭಟ್ಟ ಅವರಿಗೆ ಗುರುವಾರ ಶಾಲ್ಮಲಾ ನದಿಯ ತೀರದಲ್ಲಿ ಸನ್ಯಾಸ ಹಾಗೂ ಶಿಷ್ಯ ಸ್ವೀಕಾರ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳನ್ನು ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಋತ್ವಿಜರ ನೇತೃತ್ವದಲ್ಲಿ ಮೈಸೂರು ಕೃಷ್ಣರಾಜನಗರ ಶ್ರೀ ಯೋಗಾನಂದೇಶ್ವರಸರಸ್ವತೀ ಮಠದ ಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ಯಡತೊರೆ, ಹರಿಹರಪುರ ಶ್ರೀ ಆದಿ ಶಂಕರಾಚಾರ್ಯ ಶ್ರೀ ಶಾರದಾ ಲಕ್ಷ್ಮೀನರಸಿಂಹ ಪೀಠಮ್‌ನ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು, ಬೆಂಗಳೂರು ಚಾಮರಾಜ ಪೇಟೆ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಪೀಠಾಧಿಪತಿ ಶ್ರೀ ವಿಧ್ಯಾವಿಶ್ವೇಶ್ವರ ಭಾರತೀ ಮಹಾಸ್ವಾಮಿಗಳವರು, ಹೊಳೆನರಸೀಪುರ ಆಧ್ಯಾತ್ಮ ಪ್ರಕಾಶ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಮಹಾಸ್ವಾಮಿಗಳವರು, ಕಾಸರಗೋಡು ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು, ಸಿದ್ದಾಪುರ ನೆಲಮಾವು ಶ್ರೀಮನ್ನೆಲೆಮಾವಿನಮಠದ ಶ್ರೀಮಾಧವಾನಂದ ಭಾರತೀ ಮಹಾಸ್ವಾಮಿಗಳವರು, ತುರುವೇಕೆರೆ ಶ್ರೀಪ್ರಣವಾನಂದ ತೀರ್ಥ ಮಹಾಸ್ವಾಮಿಗಳವರು, ತಮಿಳುನಾಡು ಕಾಂಚೀಪುರಮ್ ಶ್ರೀ ಆತ್ಮಬೋಧ ತೀರ್ಥ ಸ್ವಾಮಿಗಳವರು, ತಮಿಳುನಾಡು ಕಾಂಚೀಪುರಮ್ ಶ್ರೀ ಸಹಜಾನಂದ ತೀರ್ಥ ಸ್ವಾಮಿಗಳವರು, ತಮಿಳುನಾಡು ಕಾಂಚೀಪುರಮ್ ಶ್ರೀ ಅಂಜನಾನಂದ ತೀರ್ಥ ಸ್ವಾಮಿಗಳ ಉಪಸ್ಥಿತಿಯಲ್ಲಿ ವಿಧಿವತ್ತಾಗಿ ನಡೆಸಿದರು.
ಸನ್ಯಾಸ ಹಾಗೂ ಶಿಷ್ಯ ಸ್ವೀಕಾರದ ಪರಂಪರೆಯ ಆಚರಣೆಯಂತೆ ಕಷಾಯ ವಸ್ತç, ಮರದ ಆವುಗೆ(ಪಾದುಕೆ), ದಂಡ, ಕಮಂಡಲಗಳನ್ನು ಪೂಜ್ಯ ಸ್ವರ್ಣವಲ್ಲೀ ಶ್ರೀಗಳಿಂದ ಸ್ವೀಕರಿಸಿ, ಧರಿಸಿದ ವೇ.ನಾಗರಾಜ ಭಟ್ಟ ಅವರು ಸ್ವರ್ಣವಲ್ಲೀ ಶ್ರೀಗಳೊಡನೆ ಪಾದಯಾತ್ರೆಯ ಮೂಲಕ ಸಹಸ್ರಾರು ಶಿಷ್ಯ ಭಕ್ತರ ಜೊತೆಗೆ ಸ್ವರ್ಣವಲ್ಲೀ ರಥಬೀದಿಯಲ್ಲಿ ಸಾಗಿ ಮಠ ಪ್ರವೇಶಿಸಿದರು.
ಸ್ವರ್ಣವಲ್ಲೀ ಶ್ರೀಗಳನ್ನು ಹಾಗೂ ಸನ್ಯಾಸ ಸ್ವೀಕರಿಸಿದ ನೂತನ ಉತ್ತರಾಧಿಕಾರಿ ಶಿಷ್ಯ ವೇ. ನಾಗರಾಜ ಭಟ್ಟ ಶಾಲ್ಮಲಾ ನದಿಯ ತೀರದಿಂದ ಮಠದವರೆಗೆ ಪೂರ್ಣಕುಂಭ ಹಿಡಿದ ಮಾತೆಯರು, ಡೋಲು ವಾದ್ಯ, ಪಂಚ ವಾದ್ಯ, ಛತ್ರ ಚಾಮರದ ಭವ್ಯ ಮೆರವಣಿಗೆಯಲ್ಲಿ ಶ್ರೀಮಠದ ಶಿಷ್ಯ ಭಕ್ತರು ಮೆರವಣಿಗೆಯಲ್ಲಿ ಕರೆದೊಯ್ದರು.

Next Article