For the best experience, open
https://m.samyuktakarnataka.in
on your mobile browser.

ಶೆಟ್ಟರ್‌ ವಾಪಸಾತಿ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ

04:10 PM Dec 03, 2023 IST | Samyukta Karnataka
ಶೆಟ್ಟರ್‌ ವಾಪಸಾತಿ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ

ದಾವಣಗೆರೆ: ಜಗದೀಶ ಶೆಟ್ಟರ್‌ ವಾಪಸಾತಿ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಿರಿಯ ನಾಯಕರಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದರಿಂದ ಮನಸ್ಸಿಗೆ ನೋವಾಗಿ ಹೊರ ಹೋಗಿದ್ದಾರೆ. ಬಿಜೆಪಿಗೆ ಮರಳಿ ಬರುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಶೆಟ್ಟರ್ ಮತ್ತೆ ಮರಳಿ ಬಿಜೆಪಿಗೆ ಬರುವ ಮಾಹಿತಿಯೂ ನನಗಿಲ್ಲ ಎಂದರು.