For the best experience, open
https://m.samyuktakarnataka.in
on your mobile browser.

ಶ್ರೀರಂಗನಾಥನ ಸನ್ನಿಧಿಯಲ್ಲಿ ವೈಭವಯುತ ಬ್ರಹ್ಮ ರಥೋತ್ಸವ

10:57 AM Feb 16, 2024 IST | Samyukta Karnataka
ಶ್ರೀರಂಗನಾಥನ ಸನ್ನಿಧಿಯಲ್ಲಿ ವೈಭವಯುತ ಬ್ರಹ್ಮ ರಥೋತ್ಸವ

ಶ್ರೀರಂಗಪಟ್ಟಣ : ಇಂದು ಆದಿರಂಗ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿಗೆ ವೈಭಯುತ ಬ್ರಹ್ಮ ರಥೋತ್ಸವವು ಜರುಗಲಿದೆ.
ಮದ್ಯಾಹ್ನ 1:30 ಶುಭ ವೇಳೆಗೆ ವೇಳೆಗೆ ಜಿಲ್ಲಾಧಿಕಾರಿ ಕುಮಾರ ಸೇರಿದಂತೆ ಮುಜರಾಯಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು‌ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಶ್ರೀರಂಗನಾಥ ಸ್ವಾಮಿಗೆ ದೇಶದೆಲ್ಲೆಡೆ ಅಪಾರ ಪ್ರಮಾಣದಲ್ಲಿ ಭಕ್ತರಿದ್ದು, ರಥಸಪ್ತಮಿ ಅಂಗವಾಗಿ ಜರುಗಲಿರುವ ಬ್ರಹ್ಮ ರಥೋತ್ಸವವನ್ನು ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಸಾವಿರಾರು ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.

ಸೂರ್ಯ ಮಂಡಲ, ಚಂದ್ರ ಮಂಡಲ: ರಥ ಸಪ್ತಮಿ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಸೂರ್ಯ ಮಂಡಲ ಹಾಗೂ ಚಂದ್ರ ಮಂಡಲದ ಉತ್ಸವವನ್ನು ದೇವಾಲಯದ ಪ್ರಧಾನ ಅರ್ಚಕ‌ ವಿಜಯ ಸಾರಥಿ‌ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆ ಸಾಗುವ ರಸ್ತೆಗಳಲ್ಲಿ ರಂಗೋಲಿ ಬಿಟ್ಟು ಮಡಿ ಮಾಡಿದ್ದ ನಾಗರೀಕರು ಸೂರ್ಯ ಮಂಡಲ ಹಾಗೂ ಚಂದ್ರ ಮಂಡಲದ ಉತ್ಸವಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.