ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಶ್ರೀ ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವ: ಕರ್ಮವೀರ ವಿಶೇಷ ಸಂಚಿಕೆ ಬಿಡುಗಡೆ

12:03 PM Aug 19, 2024 IST | Samyukta Karnataka

ಹುಬ್ಬಳ್ಳಿ: ಭವಾನಿ ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ವೃಂದಾವನದಲ್ಲಿ ಸೋಮವಾರ ಸಂಯುಕ್ತ ಕರ್ನಾಟಕ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವದ ಅಂಗವಾಗಿ "ಪರಿಪಾಹಿ ಗುರುರಾಯರ ನಿರುಪಮ ಸುಂದರಕಾಯ"ಕರ್ಮವೀರ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಸಂಯುಕ್ತ ಕರ್ನಾಟಕ‌ ಸಿಇಓ ಮೋಹನ್ ಹೆಗಡೆ, ಲೆಕ್ಕಪತ್ರ ವಿಭಾಗದ ಅಶೋಕ ಶಾನಭಾಗ್, ಶ್ರೀಮಠದ ಗೌರವ ವಿಚಾರಣಕರ್ತರಾದ ಎ.ಸಿ. ಗೋಪಾಲ, ಜಾಹೀರಾತು ವಿಭಾಗ ವ್ಯವಸ್ಥಾಪಕರಾದ ವಿಜ್ಞೇಶ ಭಟ್, ಪ್ರಸಾರಂಗ ವಿಭಾಗದ ಕೆ.ಎನ್. ಶಾಂತಗಿರಿ, ಶಾಮರಾವ್ ಕುಲಕರ್ಣಿ, ಗುರುರಾಜ ಹಾವನೂರು, ಸುಧೀಂದ್ರ ಹುಲಗೂರು, ವ್ಯವಸ್ಥಾಪಕರು‌ ಜೆ. ವೇಣುಗೋಪಾಲ, ಕೆ.ರಘೋತ್ತಮ ರಾವ್, ಅರ್ಚಕರಾದ ಗುರುರಾಜ ಆಚಾರ್ಯ ಸಾಮಗ, ಬಿಂದು ಮಾಧವ್ ಪುರೋಹಿತ್, ಮನೋಹರ್ ಪರ್ವತಿ ಸೇರಿದಂತೆ ಇತರರು ಇದ್ದರು.
ಕರ್ಮವೀರ ಸಂಚಿಕೆಯನ್ನು ರಾಘವೇಂದ್ರಸ್ವಾಮಿಗಳ ಸನ್ನಿದಾನದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು. ಪತ್ರಿಕೆಗೆ ಶುಭ ಹಾರೈಸಿ ನಂತರ ಮಂತ್ರಾಕ್ಷತೆ ನೀಡಿ ಎಲ್ಲರನ್ನು‌ ಸನ್ಮಾನಿಸಿದರು.

Tags :
#೩೫೩ ನೇ ಆರಾಧನಾ ಮಹೋತ್ಸವ#samyuktakarnataka#ಆರೋಗ್ಯಹಬ್ಬ#ಕರ್ಮವೀರ#ವಿಶೇಷ ಸಂಚಿಕೆ#ಶ್ರೀ ರಾಘವೇಂದ್ರ ಸ್ವಾಮಿ
Next Article