For the best experience, open
https://m.samyuktakarnataka.in
on your mobile browser.

ಸಂಸದರ ಆಪ್ತನ ಭೀಕರ ಕೊಲೆ

11:02 AM Mar 01, 2024 IST | Samyukta Karnataka
ಸಂಸದರ ಆಪ್ತನ ಭೀಕರ ಕೊಲೆ

ಕಲಬುರಗಿ: ಸಂಸದ ಡಾ. ಉಮೇಶ ಜಾಧವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಯುವ ಮುಖಂಡನ ಮೇಲೆ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಭೀಕರವಾಗಿ ಕೊಲೆಗೈದಿರುವ ದಾರುಣ ಘಟನೆ ಗುರುವಾರ ರಾತ್ರಿ ನಡೆದಿದೆ. ಅಫಜಲಪುರ ತಾಲ್ಲೂಕಿನ ಸಾಗನೂರು ಗ್ರಾಮದ ನಿವಾಸಿ ಗಿರೀಶ್ ಬಾಬು ಚಕ್ರ (31) ಎಂಬಾತ ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಕೊಲೆಗೆ ರಾಜಕೀಯ ವೈಷಮ್ಯ ಎಂದು ಹೇಳಲಾಗುತ್ತಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ದೇವಲ ಗಾಣಗಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬಂಧನಕ್ಕೆ ಆಗ್ರಹ: ದುಷ್ಕರ್ಮಿಗಳು ಗುರುವಾರ ರಾತ್ರಿ ಹೊಲದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಅವರು ಸಹೋದರ ನಾಗರಾಜ್ ಚಕ್ರ ಅವರು ಆರೋಪಿಸಿದ್ದಾರೆ. ಊಟ ಮಾಡೋಣವೆಂದು ಜಮೀನಿಗೆ ಕರೆಸಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.

ಇತ್ತೀಚೆಗೆ ಗೋಹತ್ಯೆ ನಿಷೇಧ ಕುರಿತ ಪ್ರತಿಭಟನೆಯಲ್ಲಿ ಯುವಕರು ಸ್ವ ಇಚ್ಚೆಯಿಂದ ಭಾಗವಹಿಸಿ ಹೋರಾಟವನ್ನು ಬಲಗೋಳಿಸಲು ಕೆರೆ ನೀಡಿದ್ದರು. ಸಂಸದ ಉಮೇಶ್ ಜಾಧವ್ ಬಲಗೈ ಬಂಟ ನಾಗಿ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದ, ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಕಲಬುರಗಿ BSNL ಸಲಹಾ ಸಮಿತಿಗೆ ನಿರ್ದೇಶಕರಾಗಿ ಸಂಸದ ಜಾಧವ್ ಆಯ್ಕೆ ಮಾಡಿದ್ದರು.

ಸಲಹಾ ಸಮಿತಿ‌ ನಿರ್ದೇಶಕ ನೇಮಕ ಹಿನ್ನಲೆ ಪಾರ್ಟಿ ಕೊಡುವುದಾಗಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿಗೆ ಕರೆಸಿ ಒಳಸಂಚು ಹೂಡಿ ಬರ್ಬರ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.