For the best experience, open
https://m.samyuktakarnataka.in
on your mobile browser.

ಸತತ 23ನೇ ಬಾರಿ ಉದ್ಯಮಿ ಗುಪ್ತಾಗೆ ರಫ್ತುದಾರ ಪ್ರಶಸ್ತಿ

12:53 PM Jun 10, 2024 IST | Samyukta Karnataka
ಸತತ 23ನೇ ಬಾರಿ ಉದ್ಯಮಿ ಗುಪ್ತಾಗೆ ರಫ್ತುದಾರ ಪ್ರಶಸ್ತಿ
ಭಾಗ್ಯನಗರದ ಕೇಶೋದ್ಯಮಿ ಶ್ರೀನಿವಾಸ್ ಗುಪ್ತ ಶ್ರೀನಿವಾಸ ಹೇರ್ ಇಂಡಸ್ಟ್ರಿಸ್ ಪ್ರೈವೇಟ್ ಲಿ.ಗೆ ಸತತ 23ನೇ ಬಾರಿಗೆ ಎಕ್ಸ್ ಪೋರ್ಟ್ ಎಕ್ಸಲೆನ್ಸ್ ಅವಾರ್ಡ್

ಕೊಪ್ಪಳ: ಭಾಗ್ಯನಗರದ ಕೇಶೋದ್ಯಮಿ ಶ್ರೀನಿವಾಸ್ ಗುಪ್ತ ಶ್ರೀನಿವಾಸ ಹೇರ್ ಇಂಡಸ್ಟ್ರಿಸ್ ಪ್ರೈವೇಟ್ ಲಿ.ಗೆ ಸತತ 23ನೇ ಬಾರಿಗೆ ಎಕ್ಸ್ ಪೋರ್ಟ್ ಎಕ್ಸಲೆನ್ಸ್ ಅವಾರ್ಡ್ ನೀಡಿ, ಗೌರವಿಸಲಾಗಿದೆ.

ಇತ್ತೀಚಿಗೆ ಮುಂಬೈಯ ಗ್ರಾಂಡ್ ನೆಸ್ಕೋ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ೨೦೨೧-೨೩ನೇ ಸಾಲಿನ ಪ್ರಶಸ್ತಿಗಳನ್ನು ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪ್ಲೆಸ್ ಕೌನ್ಸಿಲ್ಸ್ ಚೇರ್ಮನ್ ಹೇಮಂತ ಮಿನೋಚಾ ಸೇರಿದಂತೆ ಇತರರು ಇದ್ದರು.

ಪ್ರತಿವರ್ಷ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ಲೆಕ್ಸ್ ಕೌನ್ಸಿಲ್ ಆಫ್ ಇಂಡಿಯಾ ರಫ್ತುದಾರರಿಗೆ ಈ ಪ್ರಶಸ್ತಿಗಳನ್ನು ನೀಡಿ, ಗೌರವಿಸುತ್ತದೆ. ಕೂದಲು ಉದ್ಯಮದ ಮೂಲಕ ದೇಶ, ವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಶ್ರೀನಿವಾಸ್ ಗುಪ್ತಾ ಸತತ ೨೩ನೇ ಬಾರಿಗೆ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಾವಿರಾರು ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ನೀಡಿರುವ ಶ್ರೀನಿವಾಸ್ ಗುಪ್ತಾ ಈಗಾಗಲೇ ಹಲವಾರು ರಾಷ್ಟ್ರೀಯ , ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಎಕ್ಸಪೋರ್ಟ್ ಎಕ್ಸೆಲೆನ್ಸ್ ಪ್ರಶಸ್ತಿ ಪುರಸ್ಕೃತ ಭಾಗ್ಯನಗರದ ಶ್ರೀನಿವಾಸ್ ಗುಪ್ತಾ ಕೊಪ್ಪಳದ ವಿವಿಧ ಗಣ್ಯರು, ಜನತೆ ಅಭಿನಂದನೆ ಸಲ್ಲಿಸಿದ್ದಾರೆ.