For the best experience, open
https://m.samyuktakarnataka.in
on your mobile browser.

ಸಮೀಕ್ಷೆಗಿಂತ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ

07:26 PM Jun 02, 2024 IST | Samyukta Karnataka
ಸಮೀಕ್ಷೆಗಿಂತ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ

ಚಿಕ್ಕಮಗಳೂರು: ಲೋಕಸಭಾ ಚುನಾವಣೋತ್ತರ ಸಮೀಪಕ್ಷೆಗಳಲ್ಲಿ ಎನ್‌ಡಿಎಗೆ ಜನರು ಆಶೀರ್ವಾಸಿರುವುದನ್ನು ಖಾತ್ರಿಪಡಿಸಿದ್ದು, ಜನರು ಪ್ರಾಮಾಣಿಕ ನಾಯಕತ್ವಕ್ಕೆ ಮತ್ತು ದೇಶ ಮೊದಲು ಎಂಬ ವಿಚಾರಕ್ಕೆ ಆಶೀರ್ವಾದಿಸಿದ್ದು ಮತ್ತೊಮ್ಮೆ ಮೋದಿ ಅವರು ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜೂ.೪ರಂದು ಚುನಾವಣೋತ್ತರ ಸಮೀಕ್ಷೆಗಿಂತ ಹೆಚ್ಚಿನ ಸ್ಥಾನವನ್ನು ರಾಜ್ಯ ಮತ್ತು ದೇಶದಲ್ಲಿ ಎನ್‌ಡಿಎ ಗೆಲ್ಲುವ ವಿಶ್ವಾಸವಿದೆ. ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಮಾಡುವುದು ಹಾಗೂ ಭಾರತ ವಿಶ್ವಗುರು ಮಾಡುವ ಎಲ್ಲಾ ಯೋಜನೆಯೊಂದಿಗೆ ಕೆಸಲ ಮಾಡುತ್ತೇವೆ ಎಂದು ತಿಳಿಸಿದರು. ದೇಶಕ್ಕೆ ರಚನಾತ್ಮಕವಾದ ಪ್ರತಿಪಕ್ಷದ ಅವಶ್ಯಕತೆ ಇದೆ. ರಚನಾತ್ಮಕ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿ ಈ ನಿಟ್ಟಿನಲ್ಲಿ ಪ್ರತಿಪಕ್ಷವಾಗಿ ಅರ್ಹತೆಗಳಿಸಿಕೊಳ್ಳಲಿ ಎಂದು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಿಗೆ ಹೇಳಿದರು.