For the best experience, open
https://m.samyuktakarnataka.in
on your mobile browser.

ಸಮುದ್ರ ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಪತ್ತೆ

11:22 AM Dec 10, 2023 IST | Samyukta Karnataka
ಸಮುದ್ರ ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಪತ್ತೆ

ಉಳ್ಳಾಲ: ಸೋಮೇಶ್ವರ ಬಳಿಸಮುದ್ರ ಕಿನಾರೆಯಲ್ಲಿ ನೀರಾಟಕ್ಕಿಳಿದ ಸಂದರ್ಭದಲ್ಲಿ ಶನಿವಾರ ಸಮುದ್ರ ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಸೋಮೇಶ್ವರ ಬಳಿ ಭಾನುವಾರ ಬೆಳಿಗ್ಗೆ 8.30 ಗಂಟೆಗೆ ಪತ್ತೆಯಾಗಿದೆ.
ಸೋಮೇಶ್ವರದ ಪರಿಜ್ಞಾನ ಪಿಯು ಕಾಲೇಜಿನ ಆರು ಮಂದಿ ವಿದ್ಯಾರ್ಥಿಗಳು ಶನಿವಾರ ಸೋಮೇಶ್ವರ ಬೀಚ್ ಗೆ ತೆರಳಿದ್ದರು. ಈ ವೇಳೆ ನೀರಾಟಕ್ಕೆ ಇಳಿದಿದ್ದ ದ್ವಿತೀಯ ಪಿಯು ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜೇಶ್ವರ, ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್ (17) ಮತ್ತು ಕುಂಜತ್ತೂರು ಮಜಲ್ ನಿವಾಸಿ ಯುವರಾಜ್(17) ಸಮುದ್ರ ದ ಅಲೆಗೆ ಸಿಲುಕಿ ಕೊಚ್ಚಿ ಕೊಂಡು ಹೋಗಿದ್ದರು. ನಾಪತ್ತೆಯಾಗಿದ್ದ ಇಬ್ಬರ‌ ಮೃತ ದೇಹ ಪತ್ತೆಗಾಗಿ ಅಗ್ನಿ ಶಾಮಕ ದಳ ಹಾಗೂ ಉಳ್ಲಾಲ ಪೊಲೀಸರು ಶನಿವಾರ ರಾತ್ರಿ ವೇಳೆ ಬಟ್ಠಪ್ಪಾಡಿ,ಉಚ್ಚಿಲ ಪ್ರದೇಶದಲ್ಲಿ ಶೋಧ ನಡೆಸಿದ್ದರು.ಇವರ ಜೊತೆ ಮೊಗವೀರ ಪಟ್ನದ ಕೆಲವು ಈಜುಗಾರರು ಮೃತ ದೇಹ ಪತ್ತೆ ಶೋಧ ನಡೆಸುವ ಕಾರ್ಯದಲ್ಲಿ ಪೊಲೀಸರ‌ ಜತೆ‌ ಕೈಜೋಡಿಸಿ ಸಹಕಾರ ನೀಡಿದ್ದರು.
ಶನಿವಾರ ಬೆಳಗ್ಗೆ ಇಬ್ಬರ ಮೃತ ದೇಹ ಪತ್ತೆ ಆಗಿದ್ದು, ಇಬ್ಬರ‌ ಮೃತ ದೇಹ ವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಶವ ಮಹಜರು ನಡೆಸಿದ ಬಳಿಕ ಕುಟುಂಬ ಸ್ಥರಿಗೆ ಬಿಟ್ಟು ಕೊಡಲಿದ್ದಾರೆ.