For the best experience, open
https://m.samyuktakarnataka.in
on your mobile browser.

ಸರ್ಕಾರಿ ಜಾಗದಲ್ಲಿದ್ದ ಶ್ರೀಗಂಧದ ಮರ ಕಳವು

09:56 PM Oct 07, 2023 IST | Samyukta Karnataka
ಸರ್ಕಾರಿ ಜಾಗದಲ್ಲಿದ್ದ ಶ್ರೀಗಂಧದ ಮರ ಕಳವು

ಮುಂಡಗೋಡ: ತಾಲೂಕು ಸರಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಕಚೇರಿಯ ಪಕ್ಕದಲ್ಲಿದ್ದ ಎರಡು ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕಳ್ಳರು ಕಡಿದು ತೆಗೆದುಕೊಂಡು ಹೋಗಿರುವುದು ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.
ಆಸ್ಪತ್ರೆಯ ಕಾರ್ಯಾಲಯದ ಪಕ್ಕ ಒಂದು ಹಾಗೂ ವಸತಿ ಗೃಹದ ಆವರಣದಲ್ಲಿದ್ದ ಒಂದು ಮರವನ್ನು ಕಡಿದು ಸಾಗಿಸಲಾಗಿದೆ. ಸುಮಾರು ೧೨ ರಿಂದ ೧೫ ವರ್ಷಗಳ ಎರಡು ಮರಗಳನ್ನು ಕಡಿದು ತುಂಡುಗಳಾಗಿ ಮಾಡಿಕೊಂಡು ಟೊಂಗೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.