For the best experience, open
https://m.samyuktakarnataka.in
on your mobile browser.

ಸಾರಾಯಿಗೆ ಹಣ ಕೊಡ್ಲಿಲ್ಲವೆಂದು ತಾಯಿಯನ್ನೇ ಕೊಲೆಗೈದ ಪಾಪಿ ಮಗ

05:17 PM Nov 26, 2023 IST | Samyukta Karnataka
ಸಾರಾಯಿಗೆ ಹಣ ಕೊಡ್ಲಿಲ್ಲವೆಂದು ತಾಯಿಯನ್ನೇ ಕೊಲೆಗೈದ ಪಾಪಿ ಮಗ

ಚಿತ್ರದುರ್ಗ: ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎಂದು ಮಗನೊಬ್ಬ ತನ್ನ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರೊಪ್ಪ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.
ರೊಪ್ಪ ಗ್ರಾಮದ ಅಂಜಿನಮ್ಮ(58) ಕೊಲೆಯಾದ ಮಹಿಳೆ. ಶಿವಾರೆಡ್ಡಿ (35) ಕೊಲೆಗೈದ ಪಾಪಿ ಪುತ್ರ. ನಿರುದ್ಯೋಗಿ ಆಗಿರುವ ಶಿವರೆಡ್ಡಿ ಪ್ರತಿನಿತ್ಯ ಮದ್ಯಪಾನ ಮಾಡುವ ಮೂಲಕ ಕುಡಿತದ ಚಟಕ್ಕೆ ಬಲಿಯಾಗಿದ್ದು, ಪ್ರತಿನಿತ್ಯ ಕುಡಿಯಲು ತಾಯಿ ಅಂಜಿನಮ್ಮ ಬಳಿ ಹಣ ಕೇಳುತ್ತಿದ್ದ. ಒಂದೆರಡು ಭಾರೀ ಕೊಟ್ಟಿದ್ದ ಅಂಜಿನಮ್ಮ ಬಳಿ ಹಣ ಇಲ್ಲದೆ ಇರುವಾಗ ಹಣ ಕೊಟ್ಟಿಲ್ಲ ಎಂದು ಗಲಾಟೆ ಮಾಡುತ್ತಿದ್ದ ಎಂದು ಅಕ್ಕಪಕ್ಕದ ಮನೆಯವರು ಹೇಳುತ್ತಿದ್ದು, ಎಂದಿನಂತೆ ಕಳೆದ ರಾತ್ರಿ ಕುಡಿಯಲು ಹಣ ಕೊಡುವಂತೆ ತಾಯಿ‌ ಬಳಿ‌ ಗಲಾಟೆ ಮಾಡಿದ್ದಾನೆ. ಆದರೆ ಹಣ ಇಲ್ಲದ ಅಂಜಿನಮ್ಮ ಸಮಾಧಾನ ಮಾಡಲು ಯತ್ನಿಸಿದರು ಸಹ ಕೇಳದ ಮಗ ಶಿವರೆಡ್ಡಿ ಚಾಕುವಿನಿಂದ ಚುಚ್ಚಿ ತಾಯಿ ಅಂಜಿನಮ್ಮ ಅವರನ್ನು ಕೊಲೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ರಾಂಪುರ ಪಿಎಸ್ಐ ಮಹೇಶ್ ಹೊಸಪೇಟೆ ಭೇಟಿ ನೀಡಿದ್ದು, ಆರೋಪಿ ಶಿವಾರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ‌.