For the best experience, open
https://m.samyuktakarnataka.in
on your mobile browser.

ಸಾವರ್ಕರ್ ಅವಹೇಳನ ಪ್ರಕರಣ ದಾಖಲು

10:36 PM May 29, 2024 IST | Samyukta Karnataka
ಸಾವರ್ಕರ್ ಅವಹೇಳನ ಪ್ರಕರಣ ದಾಖಲು

ಕುಷ್ಟಗಿ: ಫೇಸ್‌ಬುಕ್ ಟಿಪ್ಪು ಟಿಪ್ಪು ಅಕೌಂಟ್ ಸ್ಟೇಟಸ್‌ನಲ್ಲಿ ವಿ.ಡಿ. ಸಾವರ್ಕರ್ ಅವರ ಭಾವಚಿತ್ರವನ್ನು ಹಾಕಿ ಅದರ ಕೆಳಗಡೆ `ರಣಹೇಡಿ ಸಾವರ್ಕರ್' ಅಂತ (ಟೆರರಿಸ್ಟ್ ಇನ್ ಇಂಡಿಯಾ ಸಾವರ್ಕರ್ ೧೦೦) ಕನ್ನಡದಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ ಪೋಸ್ಟ್ ಹಾಕಿಕೊಂಡ ತಾಲೂಕಿನ ದೋಟಿಹಾಳ ಗ್ರಾಮದ ಹುಸೇನಸಾಬ್ ಕೊಳ್ಳಿ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ೨೯ರಂದು ಮಧ್ಯಾಹ್ನ ೧೨.೩೦ಕ್ಕೆ ಪೊಲೀಸ್ ಸಿಬ್ಬಂದಿ ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಂದ ಮಾಹಿತಿ ಪರಿಶೀಲಿಸುತ್ತಿರುವಾಗ ಪ್ರಕರಣ ಬೆಳಕಿಗೆ ಬಂದಿದೆ.