For the best experience, open
https://m.samyuktakarnataka.in
on your mobile browser.

ಸಿಓಡಿ ತನಿಖೆ ಆರಂಭ

03:39 PM Dec 06, 2023 IST | Samyukta Karnataka
ಸಿಓಡಿ ತನಿಖೆ ಆರಂಭ

ಚಿಕ್ಕಮಗಳೂರು: ಚರ್ಚೆಗೆ ಗ್ರಾಸವಾಗಿದ್ದ ಪೊಲೀಸರು ಮತ್ತು ವಕೀಲರು ನಡುವಿನ ಗಲಭೆ ಪ್ರಕರಣದ ತನಿಖೆಗೆ ಸಿಐಡಿ ತಂಡ ಬುಧವಾರ ನಗರಕ್ಕೆ ಆಗಮಿಸಿದ್ದು ತನಿಖೆ ಆರಂಭಿಸಿದೆ.
ಸಿಐಡಿ ಎಸ್ಪಿ ಎನ್.ವೆಂಕಟೇಶ್ ನೇತೃತ್ವದಲ್ಲಿ ಡಿವೈಎಸ್ಪಿ ಎಂ.ಎಚ್. ಉಮೇಶ್ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಾನೂನು ಸಲಹೆಗಾರ ಆರ್.ಕೆ. ಕಾಳೆ ತಂಡದಲ್ಲಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಕಡತ ಪರಿಶೀಲನೆ ನಡೆಯುತ್ತಿದೆ.