For the best experience, open
https://m.samyuktakarnataka.in
on your mobile browser.

ಸಿಲಿಂಡರ್ ಸಿಡಿದು ಮಹಿಳೆ ಸಾವು

11:07 PM Jan 21, 2024 IST | Samyukta Karnataka
ಸಿಲಿಂಡರ್ ಸಿಡಿದು ಮಹಿಳೆ ಸಾವು

ಚಿಕ್ಕಜಾಜೂರು: ಗ್ಯಾಸ್ ಸಿಲಿಂಡರ್ ಸಿಡಿದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು. ನಾಲ್ವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಭಾನುವಾರ ಸಂಜೆ ಸಂಭವಿಸಿದೆ.
ಸಮೀಪದ ಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿ ಅಡಿಕೆ ಸುಲಿಯುವ ಶೆಡ್‌ಗಳ ಬಳಿ ಪರಮೇಶ್ವರಪ್ಪ ಎಂಬುವರು ತೆಂಗಿನಗರಿಗಳ ಶೆಡ್ಡಿನಲ್ಲಿ ಹೊಟೇಲ್ ನಡೆಸುತ್ತಿದ್ದರು. ಸಂಜೆ ಹೊಟೇಲ್ ಶೆಡ್ಡಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಶೆಡ್‌ಗಳಲ್ಲಿ ಅಡಿಕೆ ಸುಲಿಯುತ್ತಿದ್ದ ಮಹಿಳಾ ಕಾರ್ಮಿಕರು ಹೋಟೆಲ್‌ಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದುದನ್ನು ನೋಡುತ್ತಾ ನಿಂತಿದ್ದಾಗ, ಹೊಟೇಲ್ ಒಳಗೆ ಇದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಚೂರುಗಳು ಬೆಂಕಿ ನೋಡುತ್ತಾ ನಿಂತಿದ್ದ ಐವರು ಮಹಿಳೆ ಯರಿಗೆ ಸಿಡಿದಿದೆ.
ಬಿಜ್ಜೆನಾಳ್ ಗ್ರಾಮದ ಲಕ್ಷ್ಮಮ್ಮ (೫೫)ನಿಗೆ ಸಿಲಿಂಡರ್ ಚೂರು ಸಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪಕ್ಕದಲ್ಲಿದ್ದ ಎರಗಟ್ಟಿಹಳ್ಳಿ ಗ್ರಾಮದ ನೀಲಮ್ಮ (೪೫), ಬಿಜ್ಜೆನಾಳ್ ಗ್ರಾಮದ ರೇಣುಕಮ್ಮ (೬೦), ಹೊಸಹಳ್ಳಿ ಗ್ರಾಮದ ರಚನಾ (೧೯) ಹಾಗೂ ಶಶಿಕಲಾ (೫೦) ಇವರಿಗೆ ತಗುಲಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.
ಡಿವೈಎಸ್ಪಿ ಅನಿಲ್ಕುಮಾರ್, ಸಿಪಿಐ ಚಿಕ್ಕಣ್ಣನವರ್ ಹಾಗೂ ಚಿಕ್ಕಜಾಜೂರು ಪೊಲೀಸ್ ಠಾಣೆಯ ಪಿಎಸ್ಐ ಎಂ.ಟಿ. ದೀಪು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.