For the best experience, open
https://m.samyuktakarnataka.in
on your mobile browser.

ಸಿಲಿಂಡರ್ ಸ್ಫೋಟ: ಸಾಮಗ್ರಿ ನಾಶ

07:26 PM Aug 13, 2024 IST | Samyukta Karnataka
ಸಿಲಿಂಡರ್ ಸ್ಫೋಟ  ಸಾಮಗ್ರಿ ನಾಶ

ಬೆಳಗಾವಿ: ಬೆಳಗಾವಿಯ ಮಾರುತಿನಗರದ ಮಹಾವೀರ ಕಾಲನಿಯ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಭಾರೀ ಅನಾಹುತವೊಂದು ನಡೆದಿದೆ.
ಚನ್ನಪ್ಪ ವಿಠ್ಠಲ ಲಮಾಣಿ ಎಂಬುವನ ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಸೋಮವಾರ ತಡರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಘಟನೆ ನಡೆದಿದೆ. ಹಾಗಾಗಿ ಯಾವುದೇ ಸಾವು ನೋವು ವರದಿಯಾಗಿಲ್ಲ.
ಆದರೆ ವಿಠ್ಠಲ ಲಮಾಣಿ ಅವರು ಕೂಲಿ ಕೆಲಸ ಮಾಡಿ ಕೂಡಿಟ್ಟಿದ್ದ ೧.೮೦ ಸಾವಿರ ನಗದು ಹಾಗೂ ೩೫ ಗ್ರಾಂ ಚಿನ್ನ ಬೆಂಕಿಪಾಲಾಗಿದೆ. ಇನ್ನೂ ಈ ಘಟನೆ ನಡೆದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ದಳದ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags :