For the best experience, open
https://m.samyuktakarnataka.in
on your mobile browser.

ಸೋಮಣ್ಣ ಬಹಿರಂಗ ಚರ್ಚೆಗಿಳಿದಿರುವುದು ಒಳ್ಳೆಯದಲ್ಲ

05:23 PM Nov 25, 2023 IST | Samyukta Karnataka
ಸೋಮಣ್ಣ ಬಹಿರಂಗ ಚರ್ಚೆಗಿಳಿದಿರುವುದು ಒಳ್ಳೆಯದಲ್ಲ

ಹುಬ್ಬಳ್ಳಿ: ವಿ.ಸೋಮಣ್ಣ ಅವರಿಗೆ ಅತೃಪ್ತಿ, ಅಸಮಾಧಾನ ಏನೇ ಇರಲಿ. ಬಹಿರಂಗ ಚರ್ಚೆ ಒಳ್ಳೆಯದಲ್ಲ. ಸೋಮಣ್ಣ ಅವರು ನಮ್ಮ ಪಕ್ಷದ ಪ್ರಮುಖ ನಾಯಕರು. ವೈಯಕ್ತಿಕವಾಗಿಯೂ ಆತ್ಮೀಯರಾಗಿದ್ದು, ಅವರ ಜೊತೆ ಮಾತನಾಡುತ್ತೇನೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ವಿ. ಸೋಮಣ್ಣ ಹೈಕಮಾಂಡ್‌ಗೆ ದೂರು ನೀಡುತ್ತಿರುವ ಕುರಿತು ಮಾಹಿತಿ ಇಲ್ಲ. ಯಾವುದೇ ವಿಷಯ ಇರಲಿ. ಅವರ ಅಸಮಾಧಾನ, ಕುಂದುಕೊರತೆಗಳು ಏನೇ ಇರಲಿ. ಅವುಗಳನ್ನು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರಲಿ. ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ಮಾಧ್ಯಮಗಳ ಮೂಲಕ ಬಹಿರಂಗ ಹೇಳಿಕೆ ನೀಡುವುದು, ಚರ್ಚೆ ಮಾಡುವುದು ಒಳ್ಳೆಯದಲ್ಲ ಎಂದರು.
ಉತ್ತರ, ದಕ್ಷಿಣ ಭಾಗ ಮಾಡಲಾದೀತೆ?:
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿದೆ. ಇಂತಹ ವಿಚಾರದಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂದು ಭಾಗ ಮಾಡಲು ಆಗುತ್ತದೆಯೇ? ಒಂದು ವ್ಯವಸ್ಥೆಯೊಳಗೆ ಈ ಪ್ರಕ್ರಿಯೆ ಮಾಡಿದ್ದೇವೆ ಎಂದು ಹೇಳಿದರು. ಉತ್ತರ ಕರ್ನಾಟಕಕ್ಕೆ ಮೊದಲ ಆದ್ಯತೆ ಕೊಟ್ಟವರು ಬಿಜೆಪಿಯವರೇ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಅಧ್ಯಕ್ಷರನ್ನು ನೇಮಿಸಿದ್ದು ನಮ್ಮ ಬಿಜೆಪಿ ಎಂದರು. ಸಮಸ್ಯೆ ಏನಿದೆ ಅದನ್ನು ಬಗೆಹರಿಸಬೇಕು. ಅದನ್ನು ಬಿಟ್ಟು ಯಾರೋ ವ್ಯಕ್ತಿಯನ್ನು ನೇಮಕ ಮಾಡಿದಾಗ ಈ ಬಗ್ಗೆ ಚರ್ಚಿಸುವುದು ಸರಿಯಲ್ಲ ಎಂದರು.