For the best experience, open
https://m.samyuktakarnataka.in
on your mobile browser.

ಸೋಮವಾರ ರಜೆ ಘೋಷಿಸಲು ಸಿಎಂಗೆ ಆರ್‌.ಅಶೋಕ ಪತ್ರ

03:51 PM Jan 21, 2024 IST | Samyukta Karnataka
ಸೋಮವಾರ ರಜೆ ಘೋಷಿಸಲು ಸಿಎಂಗೆ ಆರ್‌ ಅಶೋಕ ಪತ್ರ

ಬೆಂಗಳೂರು: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ನಾಡಿನ ಜನರು ಸಡಗರ ಸಂಭ್ರಮದಿಂದ ಆಚರಣೆ ಮಾಡಲು ಸೋಮವಾರ ಸರ್ಕಾರಿ ರಜೆ ಘೋಷಿಸಬೇಕೆಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಸಾರ್ವಜನಿಕ ಉದ್ದಿಮೆ ಸೇರಿದಂತೆ ರಾಜ್ಯದಲ್ಲಿ ರಜೆ ಘೋಷಿಸಿ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.