For the best experience, open
https://m.samyuktakarnataka.in
on your mobile browser.

ಹನುಮಂತಪ್ಪ ಅರಿಸಿನಕೇರಿಯಿಂದ ಯತೀಂದ್ರಗೆ ಸ್ವಾಗತ

01:14 PM Dec 08, 2023 IST | Samyukta Karnataka
ಹನುಮಂತಪ್ಪ ಅರಿಸಿನಕೇರಿಯಿಂದ ಯತೀಂದ್ರಗೆ ಸ್ವಾಗತ

ಕೊಪ್ಪಳ: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರನ್ನು ತಾಲ್ಲೂಕಿನ ಬೂದಗುಂಪ ಕ್ರಾಸ್‌ನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತಿ‌ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ಸನ್ಮಾನಿಸಿದರು.ಯತೀಂದ್ರ ಅವರು ಸಂಗೊಳ್ಳಿ ರಾಯಣ್ಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಗಂಗಾವತಿ ಕ್ಷೇತ್ರದ ಯುವ ಮುಖಂಡ ಹನುಮಂತಪ್ಪ ಹೆಚ್. ಅರಸನಕೇರಿ ಸ್ವಾಗತಿಸಿ, ಸನ್ಮಾನಿಸಿದರು. ಬಳಿಕ‌ ಸಿಂಧನೂರಿಗೆ ಯತೀಂದ್ರ ತೆರಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಕೀರಪ್ಪ ಎಮ್ಮಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಬಸಣ್ಣ ಪೆದ್ಲ, ಸೀಮಣ್ಣ ಗಬ್ಬುರ್, ಗಾಳೆಪ್ಪ ಹಿಟ್ನಾಳ್, ಸೋಮಶೇಖರ್ ಡಿ.ಮೇಟಿ ಇದ್ದರು.