For the best experience, open
https://m.samyuktakarnataka.in
on your mobile browser.

ಹರೀಶಿಯಲ್ಲಿ ಕಾಡಾನೆ ಹಾವಳಿಯ ಆತಂಕ

05:05 PM Dec 25, 2023 IST | Samyukta Karnataka
ಹರೀಶಿಯಲ್ಲಿ ಕಾಡಾನೆ ಹಾವಳಿಯ ಆತಂಕ

ಶಿರಸಿ: ಸೊರಬ ಹಾಗೂ ಶಿರಸಿ ತಾಲೂಕಿನ ಗಡಿಭಾಗದಲ್ಲಿ ಬರುವ ಹರೀಶಿ ಹಾಗೂ ಸುತ್ತಮುತ್ತಲ ಕಾಡಿನಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ತೀವ್ರವಾಗಿದೆ. ಕಾಡಾನೆಗಳ ಹಿಂಡು ಗ್ರಾಮಗಳ ಗದ್ದೆ, ತೋಟಗಳಿಗೆ ದಾಳಿಯಿಡುತ್ತಿದೆ. ಮರಿಗಳ ಸಹಿತ ಇರುವ ಕಾಡಾನೆಗಳ ಹಿಂಡಿನ ದಾಳಿಯಿಂದ ಜನರು ಆತಂಕಗೊಂಡಿದ್ದಾರೆ. ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.