ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹಳೆ ದ್ವೇಷದ ಹಿನ್ನೆಲೆಯಲ್ಲಿ ಗಲಾಟೆ

11:26 AM Apr 10, 2024 IST | Samyukta Karnataka

ಕುಷ್ಟಗಿ: ಸಣ್ಣ ಕಾರಣಕ್ಕೆ ಯುವಕರ ಗುಂಪೊಂದು ಬೈಕ್ ನಂಬರ್ ಪ್ಲೇಟ್‌ಗೆ ಅಳವಡಿಸಲಾಗಿದ್ದ ಮಹಾನ್ ‌ವ್ಯಕ್ತಿಯ ಭಾವಚಿತ್ರಕ್ಕೆ ಅವಮಾನಿಸಿದಕ್ಕೆ ಸಂಬಂಧ ಪಟ್ಟಂತೆ ಗಲಾಟೆ ನಡೆಯಿತು.

ಮಲ್ಲಯ್ಯ ವೃತ್ತದಲ್ಲಿ ನಿನ್ನೆ ರಾತ್ರಿ ಯುವಕರು ಹಳೆ ದ್ವೇಷದ ಹಿನ್ನೆಲೆಯಲ್ಲಿ ಗಲಾಟೆ ಮಾಡಿದ್ದಾರೆ. ಆದರೆ ಈ ಗಲಾಟೆ ವಿಪರೀತಕ್ಕೆ ಹೋಗಿದ್ದು ಮಲ್ಲಯ್ಯ ವೃತ್ತದಲ್ಲಿ ಓರ್ವ ಯುವಕನಿಗೆ ಏರು ಧ್ವನಿಯಿಂದ ಗಲಾಟೆ ಮಾಡಿದ್ದು ಇದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.ಒಂದೇ ಸಮಾಜದ ಯುವಕರು ಭಾವಚಿತ್ರಕ್ಕೆ ಹಾನಿಗೊಳಿಸಿದ ಯುವಕನನ್ನು ಸಂಗೋಳಿ ರಾಯಣ್ಣ ಅಭಿಮಾನಿ ಮಂಜುನಾಥ ನಾಲಗಾರ ಯುವಕನಿಗೆ ತರಾಟೆ ತೆಗೆದುಕೊಂಡ ಪ್ರಸಂಗ ಜರುಗಿದೆ.

ಕುಷ್ಟಗಿಯ ಕನಕದಾಸ ವೃತ್ತದಲ್ಲಿ ಗಲಾಟೆ ಮಾಡಲು ಆರಂಭಿಸಿದರು. ತಕ್ಷಣ ಯುವಕನನ್ನು ಕರೆಸಿ ಕನಕದಾಸ ಪುತ್ತಳಿಗೆ ಮಾಲಾರ್ಪಣೆ ಮಾಡಿಸಿ ಕ್ಷಮೆ ಕೇಳಿಸಿ ಯುವಕನನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಯುವಕನಿಗೆ ಜಮಾಯಿಸಿದ ಯುವಕರು ಗುಂಪು ಧರ್ಮದೇಟು ನೀಡಿದೆ. ಗಲಾಟೆಯನ್ನು ಚದರಿಸಲು ಸಿಪಿಐ ಯಶವಂತ ಬಿಸನಳ್ಳಿ, ಮುದ್ದು ರಂಗಸ್ವಾಮಿ ಅವರ ನೇತೃತ್ವದಲ್ಲಿ ಲಾಟಿ ಬೀಸಲಾಯಿತು. ನಂತರ ಗಲಾಟೆಯನ್ನು ಶಾಂತಿ ಗೊಳಿಸಲಾಯಿತು. ಕೆಲ ನಿಮಿಷಗಳ ಕಾಲ ಗೊಂದಲ ಉಂಟಾಗಿತ್ತು.

Next Article