For the best experience, open
https://m.samyuktakarnataka.in
on your mobile browser.

ಹಳ್ಳಕ್ಕೆ ಬಿದ್ದ ಬಸ್: ಹಲವರಿಗೆ ಗಾಯ

09:21 PM Oct 15, 2023 IST | Samyukta Karnataka
ಹಳ್ಳಕ್ಕೆ ಬಿದ್ದ ಬಸ್  ಹಲವರಿಗೆ ಗಾಯ

ಕುಷ್ಟಗಿ: ಸಾರಿಗೆ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಘಟನೆ ತಾಲೂಕಿನ ಹನುಮಸಾಗರ ಸಮೀಪದ ಮಿಯ್ಯಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಈ ಬಸ್ಸಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಬಹಳಷ್ಟು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಸಮೀಪದ ಹನಮಸಾಗರ ಹಾಗೂ ಕುಷ್ಟಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ಡಿಪೋದ ಈ ಬಸ್ಸು(ಕೆಎ: ೫೭ ಎಫ್: ೪೫೩೭) ದೋಟಿಹಾಳ ಗ್ರಾಮದಿಂದ ಮಂಗಳೂರುಗೆ ಹೊರಟಿತ್ತು ಎನ್ನಲಾಗಿದೆ.
ಪೊಲೀಸರ ಭೇಟಿ: ಘಟನೆ ನಡೆದ ಸ್ಥಳಕ್ಕೆ ಕುಷ್ಟಗಿ ಪೊಲೀಸರು ಹಾಗೂ ಹನುಮಸಾಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕುಷ್ಟಗಿ ಪಿಎಸ್‌ಐ ಮುದ್ದು ರಂಗಸ್ವಾಮಿ ಹಾಗೂ ಹನುಮಸಾಗರ ಪಿಎಸ್‌ಐ ವಿರೂಪಾಕ್ಷಪ್ಪ ಶೆಟ್ಟರ, ಸಾರಿಗೆ ಇಲಾಖೆಯ ಅಧಿಕಾರಿಗಳು ಇದ್ದರು.