For the best experience, open
https://m.samyuktakarnataka.in
on your mobile browser.

ಹೃದಯಾಘಾತದಿಂದ ಕ್ರೀಡಾಂಗಣದಲ್ಲಿ ಪಶುವೈದ್ಯ ಸಾವು

06:50 PM Jan 12, 2024 IST | Samyukta Karnataka
ಹೃದಯಾಘಾತದಿಂದ ಕ್ರೀಡಾಂಗಣದಲ್ಲಿ ಪಶುವೈದ್ಯ ಸಾವು

ಚಿಕ್ಕಮಗಳೂರು: ಕ್ರಿಕೆಟ್ ಆಡಲು ಬಂದಿದ್ದ ಸೋಮವಾರಪೇಟೆ ಪಶುವೈದ್ಯನೊಬ್ಬ ಹೃದಯಾಘಾತದಿಂದ ಕ್ರೀಡಾಂಗಣದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಶಿವಪ್ಪ ಬಾದಾಮಿ(56) ಎಂದು ಗುರುತಿಸಲಾಗಿದ್ದು, ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟಕ್ಕೆ ಆಗಮಿಸಿದ್ದ ಪಶುವೈದ್ಯ ಅವರು ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಪಶುವೈದ್ಯ ಕ್ರಿಕೆಟ್ ಆಡಿ ಫೋಟೋ ಸೆಷೆನ್‌ನಲ್ಲಿ ಪಾಲ್ಗೊಂಡು ನಂತರ ಕುಳಿತಿದ್ದ ಬಾದಾಮಿ ಕ್ರಿಕೆಟ್ ನೋಡುತ್ತಿದ್ದಂತೆ ಅಲ್ಲಿಯೇ ಕುಸಿದು ಬಿದ್ದಿದ್ದಾರೆ.
ಸೀವಿಯರ್ ಹಾರ್ಟ್ ಅಟ್ಯಾಕ್ ಆದಾಗ ಕೂಡಲೇ ಸ್ಥಳದಲ್ಲಿದ್ದ ಇತರೆ ವೈದ್ಯರು ಚಿಕಿತ್ಸೆಗೆ ಮುಂದಾದರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಬಾದಾಮಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ಸದ್ಯ ಬಾದಾಮಿಯವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೈಸೂರು ವಿಭಾಗ ಮಟ್ಡದ ಪಶುವೈದ್ಯರ ಕ್ರೀಡಾ ಕೂಟದಲ್ಲಿ ಏಳು ಜಿಲ್ಲೆಗಳ ೧೨ ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು.
ಚಿಕ್ಕಮಗಳೂರು ಪಶುವೈದ್ಯ ಸಂಘ ಆಯೋಜಿಸಿದ್ದ ಎರಡು ದಿನಗಳ ಕ್ರಿಕೆಟ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೊಡಗು ತಂಡ ನಗರಕ್ಕೆ ಆಗಮಿಸಿ ಮೊದಲು ಒಂದು ಪಂದ್ಯ ಆಡಿತ್ತು. ಮ್ಯಾಚ್ ನಲ್ಲಿ ಉತ್ಸಾಹದಿಂದ ಆಡಿ ನಂತರ ಕುಳಿತಿದ್ದು ಸ್ಥಳದಲ್ಲಿ ಕುಸಿದು ಬಿದ್ದರು ಬೆಳಗಾವಿ ಜಿಲ್ಲೆಯ ಶಿವಪ್ಪ ಬಾದಾಮಿ ಅಕಾಲಿಕ ಮರಣಕ್ಕೆ ಪಶುವೈದ್ಯ ಲೋಕದ ಕಂಬನಿ ಮಿಡಿದಿದೆ. ನಂತರ ಕ್ರೀಡಾಕೂಟ ಸ್ಥಗಿತಗೊಳಿಸಲಾಯಿತು.