For the best experience, open
https://m.samyuktakarnataka.in
on your mobile browser.

ಹೆತ್ತ ತಾಯಿಯಂತೆ ಪ್ರಕೃತಿಯನ್ನೂ ಗೌರವಿಸಿ

11:58 AM Sep 21, 2024 IST | Samyukta Karnataka
ಹೆತ್ತ ತಾಯಿಯಂತೆ ಪ್ರಕೃತಿಯನ್ನೂ ಗೌರವಿಸಿ

ಬೆಂಗಳೂರು: ಹೆತ್ತ ತಾಯಿಯಂತೆ ನಮ್ಮನ್ನು ಹೊತ್ತ ಪ್ರಕೃತಿಯನ್ನೂ ಗೌರವಿಸ ಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಏಕ್ ಪೇಡ್ ಮಾ ಕೆ ನಾಮ್, ಗಿಡಗಳನ್ನು ಬೆಳೆಸಿ ಪ್ರಕೃತಿ ಉಳಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿರುವಂತೆ "ಅಮ್ಮನ ಹೆಸರಿನಲ್ಲಿ ಒಂದು ಗಿಡ" ಮತ್ತು ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ನಡೆದ "ಸ್ವಚ್ಛತೆಯೇ ಸೇವೆ -2024" ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದೆನು. ಹೆತ್ತ ತಾಯಿಯನ್ನು ಯಾವ ರೀತಿ ಗೌರವಿಸುತ್ತೇವೋ ಅದೇ ರೀತಿ ನಮ್ಮನ್ನು ಹೊತ್ತ ಪ್ರಕೃತಿಯನ್ನೂ ಗೌರವಿಸಿ ಅದನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಪ್ರಧಾನಮಂತ್ರಿಗಳ ಈ ಕರೆಗೆ ದೇಶಾದ್ಯಂತ ಉತ್ತಮ‌ ಸ್ಪಂದನೆ ಕೂಡ ದೊರಕಿದೆ. ಸಾರ್ವಜನಿಕರು ತಾವೂ ಕೂಡ ತಮ್ಮ ಸುತ್ತಮುತ್ತ ಗಿಡ ನೆಟ್ಟು ಅದನ್ನು ಪೋಷಿಸುವ ಮೂಲಕ ಈ ಅಭಿಯಾನದಲ್ಲಿ ಭಾಗವಹಿಸಬೇಕು ಮತ್ತು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿ ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ತಾವೆಲ್ಲರೂ ಕೈಜೋಡಿಸಬೇಕಾಗಿ ವಿನಂತಿ ಎಂದಿದ್ದಾರೆ.