ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

೧೯ನೇ ಕ್ರಸ್ಟ್ ಗೇಟ್ ಅಳವಡಿಕೆಗೆ ಪೂಜೆಯಿಂದ ಚಾಲನೆ

12:26 PM Aug 14, 2024 IST | Samyukta Karnataka

ಬಳ್ಳಾರಿ: ತುಂಗಭದ್ರಾ ಜಲಾಶಯದ ೧೯ ನೇ ಕ್ರಸ್ಟ್ ಗೇಟ್ ಅಳವಡಿಕೆಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

ತುಂಗಭದ್ರಾ ಜಲಾಶಯದ ಗೇಟ್ 19 ರ ಬಳಿ ಅರ್ಚಕ ವಾದಿರಾಜ ಆಚಾರ್ಯ ಪೂಜೆ ಮಾಡಿದರು. ತಜ್ಞ ಕನ್ಹಯ್ಯ ನಾಯ್ಡು,
ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್, ಉಸ್ತುವಾರಿ ಕಾರ್ಯದರ್ಶಿ ನವೀನ್, ಡಿಸಿ ದಿವಾಕರ್ ಇತರರು ಪೂಜೆಯಲ್ಲಿ ಭಾಗಿಯಾದರು.
ಪೂಜೆಯ ಬಳಿಕ ಮಾತನಾಡಿದ ವಿಜಯನಗರ, ಬಳ್ಳಾರಿ ಉಸ್ತುವಾರಿ ಸಚಿವ ಸದ್ಯ ತುಂಗಭದ್ರಾ ಜಲಾಶಯಲ್ಲಿ ೯೨ ಟಿಎಂಸಿ ನೀರಿದೆ. ಇನ್ನೂ ನೀರಿನ ಮಟ್ಟ ಕಡಿಮೆಯಾಗಬೇಕು. ನೀರು ಪೋಲಾಗದಂತೆ ಗೇಟು ಅಳವಡಿಕೆ ಕಾರ್ಯ ಆರಂಭಿಸಲಾಗುತ್ತಿದೆ. ತಜ್ಞರು, ಟಿಬಿ ಬೋಡ್೯ ಅಧಿಕಾರಿಗಳು, ನುರಿತ ಎಂಜಿನಿಯರ್ ಗಳು, ಕಾರ್ಮಿಕರ ಮೂಲಕ ಕೆಲಸ ಆರಂಭಿಸಲಾಗುತ್ತಿದೆ. ಸದ್ಯ ಎ ಟೀಂ ಈಗ ಕಾರ್ಯಚರಣೆಗೆ ಇಳಿದಿದೆ. ಇದು ಯಾವ ರೀತಿ ಸ್ಪಂದನೆ ದೊರೆಯುತ್ತದೆ ಎನ್ನುವ ಆಧಾರದ ಮೇಲೆ ಬಿ ಟೀಂ ಕೆಲಸಕ್ಕೆ ಇಳಿಯಲಿದೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ಈಗ ಬೆಳೆದ ಬೆಳೆಗೆ ನಷ್ಟವಾಗದಂತೆ ಎಲ್ಲ ರೀತಿಯ ಪರಿಪೂರ್ಣ ಸಿದ್ದತೆಯೊಂದಿಗೆ ಗೇಟ ಅಳವಡಿಕೆ ನಡೆಯಲಿದೆ ಎಂದರು.

Tags :
#Tungabhadra#TungabhadraDam#TungabhadraReservoir
Next Article